masthmagaa.com:
ಪೆಗಸಸ್ ಕಳ್ಳಗಣ್ಣು ಸಾಫ್ಟ್ವೇರ್ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತೆ ವಾಗ್ದಾಳಿ ನಡೆಸಿದ್ದಾರೆ. ಮೋದಿ ಮತ್ತು ಅಮಿತ್ ಶಾ ಸೇರ್ಕೊಂಡ್ ಪ್ರಜಾಪ್ರಭುತ್ವದ ಆತ್ಮದ ಮೇಲೆ ದಾಳಿ ಮಾಡಿದ್ದಾರೆ. ನಂದು ಒಂದೇ ಒಂದು ಪ್ರಶ್ನೆ ಭಾರತ ಸರ್ಕಾರ ಪೆಗಸಸ್ ಸಾಫ್ಟ್ವೇರ್ ಅನ್ನ ಖರಿದಿಸಿದ್ಯೋ, ಇಲ್ವೋ ಹೇಳಲಿ ಅಂತ ಹೇಳಿದ್ದಾರೆ. ಇದಕ್ಕೆ ತಿರುಗೇಟು ಕೊಟ್ಟಿರೋ ಬಿಜೆಪಿಯ ಸಂಬಿತ್ ಪಾತ್ರಾ, ರಾಹುಲ್ ಗಾಂಧಿ ಫೋನ್ ಹ್ಯಾಕ್ ಆಗಿದ್ರೆ ಮತ್ಯಾಕೆ ಪೊಲೀಸ್ ಕಂಪ್ಲೇಂಟ್ ಕೊಟ್ಟಿಲ್ಲ. ಅದೂ ಅಲ್ದೆ, ರಾಹುಲ್ ಗಾಂಧಿ ಫೋನ್ ಅನ್ನ ಯಾರಾದ್ರೂ ಯಾಕೆ ಹ್ಯಾಕ್ ಮಾಡ್ತಾರೆ? ಅವರಿಂದ ಸರಿಯಾಗಿ ಕಾಂಗ್ರೆಸ್ ಪಕ್ಷವನ್ನೇ ಮುನ್ನಡೆಸೋಕೆ ಆಗ್ತಿಲ್ಲ. ಅವರ ಫೋನ್ ಅನ್ನ ಹ್ಯಾಕ್ ಮಾಡಿ ಏನ್ ಸಿಗುತ್ತೆ? ರಾಹುಲ್ ಜೀ ನೀವು ನಿಮ್ಮ ಫೋನ್ ಅನ್ನ ಚೆಕ್ ಮಾಡ್ಸಿ ಅಂತ ಹೇಳಿದ್ದಾರೆ. ಇನ್ನು ಪೆಗಸಸ್ ವಿಚಾರಕ್ಕೆ ವಿಪಕ್ಷಗಳು ಗಲಾಟೆ ಮಾಡಿದ ಹಿನ್ನೆಲೆ ಇವತ್ತು ಕೂಡ ಸಂಸತ್ ಅಧಿವೇಶನ ಸರಿಯಾಗಿ ನಡೆಯಲಿಲ್ಲ.
-masthmagaa.com
Contact Us for Advertisement