masthmagaa.com:
ಲೋಕಸಭೆ ಚುನಾವಣೆ ಸಂಬಂಧ ಮತ್ತೆ ಅಧಿಕಾರದ ಗದ್ದುಗೆ ಏರಲು ನೋಡ್ತಿರೊ ಪ್ರಧಾನಿ ಮೋದಿ ಕಾಂಗ್ರೆಸ್ ವಿರುದ್ದ ಕಿಡಿಕಾರಿದ್ದಾರೆ. ಉತ್ತರಾಖಂಡ್ನ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ಪಿಎಂ, ಈ ಕಾಂಗ್ರೆಸ್ ಪಕ್ಷ ತುರ್ತು ಮನಸ್ಥಿತಿಯನ್ನ ಹೊಂದಿದೆ. ದೇಶವನ್ನ ಅರಾಜಕತೆ ಹಾಗೂ ಅಸ್ಥಿರತೆಯತ್ತ ತಳ್ಳೊಕೆ ಬಯಸ್ತಿದೆ ಅಂತೇಳಿದ್ದಾರೆ. ಅಂದ್ಹಾಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಬಿಜೆಪಿ ಮ್ಯಾಚ್ ಫಿಕ್ಸಿಂಗ್ ಮಾಡ್ಕೊಂಡು ಅಧಿಕಾರಕ್ಕೆ ಬಂದ್ರೆ ಸಂವಿಧಾನವನ್ನೆ ಬದಲಾಯಿಸಲಿದೆ. ಆಗ ದೇಶವೇ ಬೆಂಕಿ ಹತ್ಕೊಂಡು ಉರಿಯಲಿದೆ ಅಂತೇಳಿದ್ರು. ಈ ವಿಚಾರವಾಗಿ ರಿಯಾಕ್ಟ್ ಮಾಡಿರೊ ಮೋದಿ, ಕಾಂಗ್ರೆಸ್ನ ಯುವರಾಜ ಮೋದಿ ಮೂರನೇ ಅವಧಿಗೆ ಆಯ್ಕೆಯಾದ್ರೆ ದೇಶಕ್ಕೆ ಬೆಂಕಿ ಬೀಳುತ್ತೆ ಅಂದಿದ್ದಾರೆ. ದೇಶವನ್ನ 60 ವರ್ಷ ಆಳಿದವ್ರು, ಈಗ ದೇಶಕ್ಕೆ ಬೆಂಕಿ ಹಚ್ಚೋ ಬಗ್ಗೆ ಮಾತಾಡ್ತಿದ್ದಾರೆ. ಚುನಾವಣಾ ಆದೇಶದ ಬಗ್ಗೆನೇ ಜನರನ್ನ ಪ್ರಚೋದಿಸಲು ಆರಂಭಿಸಿದ್ದಾರೆ. ಇವರಿಗೆ ಪ್ರಜಾ ಪ್ರಭುತ್ವ ವ್ಯವಸ್ಥೆ ಮೇಲೆ ನಂಬಿಕೆಯೇ ಇಲ್ಲ ಅಂತ ಮೋದಿ ಕಿಡಿಕಾರಿದ್ದಾರೆ. ಅಲ್ಲದೆ ಚುನಾವಣೆಯಲ್ಲಿ ಇವ್ರನ್ನ ಒಬ್ಬೊಬ್ರನ್ನೇ ನೀವು ಮನೆಗೆ ಕಳಿಸ್ಬೇಕು. ಒಬ್ರನ್ನೂ ಬಿಡ್ಬಾರ್ದು ಅಂದಿದ್ದಾರೆ.
-masthmagaa.com
Contact Us for Advertisement