ಪ್ರಿಯಾಂಕಾ ಚೋಪ್ರಾ ಬಾಲಿವುಡ್‌ ಬಿಟ್ಟೊಗಿದ್ದು ಒಳ್ಳೆದಾಯ್ತು: ಶೇಖರ್‌ ಸುಮನ್‌

masthmagaa.com:

ಬಾಲಿವುಡ್‌ನ ಕರಾಳತೆಯನ್ನ ಮೊನ್ನೆ ತಾನೆ ಪ್ರಿಯಾಂಕಾ ಚೋಪ್ರಾ ಬಿಚ್ಚಿಟ್ಟಿದ್ದರು. ಬಾಲಿವುಡ್‌ನ ರಾಜಕೀಯ ಯಾವ್‌ ರೀತಿ ಇರತ್ತೆ, ಪ್ರಿಯಾಂಕಾರನ್ನ ಸಿನಿಮಾದಿಂದ ದೂರ ಉಳಿಸಬೇಕು ಅಂತ ಎಷ್ಟೋ ಕಾಣದ ಕೈಗಳ ಕುತಂತ್ರದ ಬಗ್ಗೆ ಪ್ರಿಯಾಂಕ ಚೋಪ್ರಾ ಹೇಳಿದ್ದರು. ಪ್ರಿಯಾಂಕಾ ಚೋಪ್ರಾ ಹೇಳಿಕೆಗೆ ಬಾಲಿವುಡ್‌ ಸೆಲೆಬ್ರಿಟಿಗಳು ಹೌದು ಬಾಲಿವುಡ್‌ನಲ್ಲಿ ಈ ರೀತಿ ಎಲ್ಲಾ ನಡೀತಾ ಇದೆ ಅಂತ ಕೂಡ ಹೇಳಿದ್ರು, ಇದೆಲ್ಲದರ ನಡುವೆ ಶೇಖರ್ ಸುಮನ್ ಕೂಡ ಮಾತನಾಡಿದ್ದಾರೆ. “ಬಾಲಿವುಡ್‌ನಲ್ಲಿಇದೆಲ್ಲಾ ಮೊದಲಿನಿಂದಲೂ ನಡೆದು ಬಂದಿದೆ, ನಿಮ್ಮನ್ನ ಮುಗಿಸುವವರೆಗೂ ನಿಮ್ಮ ಮೇಲೆ ದಬ್ಬಾಳಿಕೆಗಳು ನಡೀತಾನೇ ಇರತ್ತೆ, ಸುಶಾಂತ್‌ ಸಿಂಗ್‌ ರಜಪೂತ್‌ಗೂ ಸಹ ಇದೇ ಆಗಿತ್ತು. ಇವೆಲ್ಲವನ್ನ ಸಹಿಸಬೇಕು ಇಲ್ಲವಾದಲ್ಲಿ ಬಾಲಿವುಡ್‌ನ್ನ ತ್ಯಜಿಸಬೇಕು, ಪ್ರಿಯಾಂಕಾ ಅವರು ಬಾಲಿವುಡ್‌ನ್ನ ತ್ಯಜಿಸಿ ಒಳ್ಳೆಯ ನಿರ್ಧಾರ ಮಾಡಿದ್ದಾರೆ. ನನ್ನನ್ನ ಮತ್ತು ನನ್ನ ಮಗ ಆಧ್ಯಾಯನ್‌ನ್ನ ಸುಮಾರು ಪ್ರಾಜೆಕ್ಟ್‌ಗಳಿಂದ ದೂರ ಆಗುವಂತೆ ಬಾಲಿವುಡ್‌ನ 4ಜನ ಮಾಡಿದ್ದಾರೆ. ಈ ವಿಷಯದ ಬಗ್ಗೆ ನನಗೆ ಖಚಿತವಾದ ಮಾಹಿತಿ ಇದೆ. ಆದರೆ ಒಂದಂತೂ ಸತ್ಯ ಅವರು ಅಡೆತಡೆಗಳನ್ನ ಸೃಷ್ಠಿಸಬಹುದು ಆದರೆ ನಮ್ಮನ್ನ ತಡೆಯೋಕೆ ಅವರ ಹತ್ತಿರ ಸಾಧ್ಯ ಇಲ್ಲ” ಎಂದು ಟ್ವೀಟ್‌ ಮಾಡಿದ್ದಾರೆ.

-masthmagaa.com

Contact Us for Advertisement

Leave a Reply