ಪುನೀತ್ ನೆನೆದು ಸಾಧು ಕೋಕಿಲಾ ಹೇಳಿದ್ದೇನು:?

masthmagaa.com:

ಪುನೀತ್​ ಜೊತೆಗಿನ ತಮ್ಮ ಕೊನೇ ನೆನಪನ್ನ ಹಂಚಿಕೊಂಡಿರೋ ಹಾಸ್ಯನಟ ಸಾಧು ಕೋಕಿಲ, ಅಕ್ಟೋಬರ್ 28ನೇ ತಾರೀಖು ಸಿದ್ಧಾರೂಡ ಸ್ವಾಮಿಗಳ ಪ್ರೋಗ್ರಾಂಗೆ ಅಪ್ಪು ಸರ್​ರನ್ನ ಕರೆದಿದ್ವಿ. ಆದ್ರೆ 28ಕ್ಕೆ ನಂಗೆ ಊರಿಗೆ ಹೋಗೋಕ್ಕಿದೆ ಅಂತ ಹೇಳಿ ಆ ಪ್ರೋಗ್ರಾಂ ಅನ್ನ 27ಕ್ಕೆ ಪ್ರಿಪೋನ್​ ಮಾಡ್ಕೊಂಡಿದ್ರು​. ಬಹುಶಃ 28ನೇ ತಾರೀಖು ಅಪ್ಪು ಸರ್​ ಊರಿಗೆ ಹೋಗಿದ್ರೆ ಇವತ್ತು ಬದುಕಿರುತ್ತಿದ್ರೇನೋ. ಊರಿಗೆ ಹೋಗೋದು ಯಾಕೆ ತಡ ಮಾಡಿದ್ರೋ ಗೊತ್ತಿಲ್ಲ. ಒಬ್ಬ ವ್ಯಕ್ತಿ 80 ವರ್ಷ ಬದುಕಲಿ, ಮೂರು ವರ್ಷ ಬದುಕಲಿ. ಬದುಕಿದ್ರೆ ಅಪ್ಪು ಸರ್​ ಥರ ಬದುಕಬೇಕು. ಅಪ್ಪು ಸರ್ ನಿಧನರಿಂದ ಇಡೀ ಚಿತ್ರಂಗದ ಒಂದು ಕಾಲೇ ಹೋದಂತಾಗಿದೆ.

-masthmagaa.com

Contact Us for Advertisement

Leave a Reply