ರಾಜ್ಯದಲ್ಲಿ ಮತ್ತೆ 3 ದಿನ ಭಯಂಕ ಮಳೆ…ಎಚ್ಚರ..ಎಚ್ಚರ

ಬೆಂಗಳೂರು: ಈ ಬಾರಿ ತಡವಾಗಿ ಶುರುವಾದ ಮಳೆಯಬ್ಬರ ಅಕ್ಟೋಬರ್ ಮುಗೀತಾ ಬಂದ್ರು ಇನ್ನೂ ನಿಂತಿಲ್ಲ. ಈಗ ಪುನಃ ರಾಜ್ಯದಲ್ಲಿ ಮತ್ತೆ 3-4 ದಿನಗಳ ಕಾಲ ಭರ್ಜರಿ ಮಳೆಯಾಗಲಿದೆ ಅಂತ ಹವಾಮಾನ ಇಲಾಖೆ ಎಚ್ಚರಿಸಿದೆ. ಪ್ರಮುಖವಾಗಿ ಕೊಡಗು, ಶಿವಮೊಗ್ಗ, ಚಿಕ್ಕಮಗಳೂರು, ಹಾಸನದಲ್ಲಿ ಭಾರಿ ಮಳೆಯಾಗಲಿದ್ದು, ಈಗಾಗಲೇ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲೂ ಮಳೆಯ ಅಬ್ಬರ ಜೋರಾಗಿ ಇರಲಿದೆ.  ದಕ್ಷಿಣ ಒಳನಾಡು ಮತ್ತು ಉತ್ತರ ಕರ್ನಾಟಕ ಹಾಗೂ ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಆರೆಂಜ್ ಎಚ್ಚರಿಕೆ ನೀಡಲಾಗಿದೆ. ಈ ಭಾಗಗಳಲ್ಲಿ ಗುಡುಗು-ಸಿಡಿಲು ಮಳೆಯಾಗೋ ಸಾಧ್ಯತೆ ಇದೆ.

Contact Us for Advertisement

Leave a Reply