ಜೈಲಲ್ಲಿರೋ ಡಿ.ಕೆ ಶಿವಕುಮಾರ್ ಮತ್ತು ಇಡಿ ವಿಚಾರಣೆ ಎದುರಿಸಿ ಬಂದಿರೋ ಲಕ್ಷ್ಮೀ ಹೆಬ್ಬಾಳ್ಕರ್ಗೆ ಮತ್ತಷ್ಟು ಸಂಕಷ್ಟ ಎದುರಾಗುವ ಸಾಧ್ಯತೆ ಇದೆ. ಯಾಕಂದ್ರೆ ಇವತ್ತು ಇಡಿ ಅಧಿಕಾರಿಗಳು ಮಾಜಿ ಶಾಸಕ ಕೆ.ಎನ್.ರಾಜಣ್ಣ ವಿಚಾರಣೆ ನಡೆಸಲಿದ್ದಾರೆ. ಈಗಾಗಲೇ ದೆಹಲಿ ತೆರಳಿರುವ ರಾಜಣ್ಣ, ಲೋಕನಾಯಕ ಭವನದಲ್ಲಿರೋ ಇಡಿ ಕಚೇರಿ ಮುಂದೆ ಹಾಜರಾಗಲಿದ್ದಾರೆ.
ರಾಜಣ್ಣ ಅವರು ಅಪೆಕ್ಸ್ ಬ್ಯಾಂಕ್ ಗಳ ಅಧ್ಯಕ್ಷರಾಗಿದ್ದಾಗ ಲಕ್ಷ್ಮಿ ಹೆಬ್ಬಾಳ್ಕರ್ ಒಡೆತನದ ಹರ್ಷಾ ಶುಗರ್ಸ್ ಕಾರ್ಖಾನೆ ಪ್ರಾರಂಭಕ್ಕೆ 300 ಕೋಟಿ ರೂಪಾಯಿ ಸಾಲ ನೀಡಿದ್ದರು. ಜೊತೆಗೆ ತುಮಕೂರು ಡಿಸಿಸಿ ಬ್ಯಾಂಕ್ ಮೂಲಕ 25 ಕೋಟಿ ಸಾಲ ಪಡೆಯಲು ಸಹಾಯ ಕೂಡ ಮಾಡಿದ್ದರು. ಈ ಸಂಬಂಧ ನೋಟಿಸ್ ನೀಡಿದ್ದ ಇಡಿ ಅಧಿಕಾರಿಗಳು, ಇಂದು ವಿಚಾರಣೆ ನಡೆಸಲಿದ್ದಾರೆ.
ಈ ಸಾಲದ ಬಗ್ಗೆ ಪ್ರತಿಕ್ರಿಯಿಸಿದ್ದ ಲಕ್ಷ್ಮೀ ಹೆಬ್ಬಾಳ್ಕರ್, ತಾನು ಕಾನೂನುಬದ್ಧವಾಗಿಯೇ ಸಾಲ ಪಡೆದಿದ್ದೇನೆ ಎಂದಿದ್ದರು. ಇದೇ ವೇಳೆ ರಾಜಣ್ಣ ಕೂಡ ತಾನು ಸೂಕ್ತ ದಾಖಲೆಗಳೊಂದಿಗೆ ವಿಚಾರಣೆಗೆ ಹಾಜರಾಗುತ್ತೇನೆ ಎಂದಿದ್ದರು.
Contact Us for Advertisement