ದೆಹಲಿ: ಈಶಾನ್ಯ ದೆಹಲಿಯಲ್ಲಿ ಹಿಂಸಾಚಾರ ನಡೆದ ಕೆಲದಿನಗಳ ಬಳಿಕ ತಮಿಳುನಾಡು ಸೂಪರ್ ಸ್ಟಾರ್ ರಜಿನಿಕಾಂತ್ ಮಹತ್ವದ ಹೇಳಿಕೆ ಕೊಟ್ಟಿದ್ದಾರೆ. ದೇಶದ ಶಾಂತಿ ಕಾಪಾಡಲು ನಾನು ಯಾವುದೇ ಪಾತ್ರ ನಿರ್ವಹಿಸಲು ಸಿದ್ಧ ಅಂತ ಹೇಳಿದ್ದಾರೆ. ಅವರ ಪೋಯೆಸ್ ಗಾರ್ಡ್ನಲ್ಲಿರೋ ಮನೆಯ ಮುಂದೆ ಕೆಲ ಮುಸ್ಲಿಂ ನಾಯಕರನ್ನು ಭೇಟಿಯಾದ ಬಳಿಕ ಟ್ವೀಟ್ ಮಾಡಿದ ಅವರು, ನಾನು ದೇಶದ ಶಾಂತಿಗೆ ಯಾವುದೇ ಪಾತ್ರ ನಿರ್ವಹಿಸಲು ಸಿದ್ಧ. ದೇಶದ ಪ್ರಮುಖ ಉದ್ದೇಶ ಪ್ರೀತಿ, ಶಾಂತಿ ಮತ್ತು ಏಕತೆಯಾಗಿರಬೇಕು ಎಂಬ ಹೇಳಿಕೆಯನ್ನು ನಾನು ಒಪ್ಪಿಕೊಳ್ಳುತ್ತೇನೆ ಅಂತ ಹೇಳಿದ್ದಾರೆ. ನಿನ್ನೆಯಷ್ಟೇ ಮುಸ್ಲಿಂ ಸಂಘಟನೆಯಾದ ತಮಿಳುನಾಡು ಜಮಾತುಲ್ ಉಮಾ ಸಬಾಯಿಯ ಸದಸ್ಯರು ರಜಿನಿಕಾಂತ್ ಭೇಟಿಯಾಗಿದ್ದರು.
Contact Us for Advertisement2020-03-02