ಶ್ರೀಲಂಕಾ ಪರಿಸ್ಥಿತಿ ಬಗ್ಗೆ ಲಂಕಾ ಕ್ರಿಕೆಟಿಗರು ಹೇಳಿದ್ದೇನು ಗೊತ್ತಾ?

masthmagaa.com:

ತಮ್ಮ ತವರಿನಲ್ಲಿ ಆಗ್ತಾ ಇರೋ ಪ್ರಕ್ಷುಬ್ದತೆ ವಿರುದ್ಧ ಈಗ ಲಂಕಾ ಕ್ರಿಕೆಟಿಗರು ‍ಧ್ವನಿ ಎತ್ತಿದ್ದಾರೆ. ಶ್ರೀಲಂಕಾದ ಮಾಜಿ ನಾಯಕ ಮಹೇಲ ಜಯವರ್ಧನೆ ಮತ್ತು ಸದ್ಯದ ಬ್ಯಾಟಿಂಗ್‌ ತಾರೆ ಭನುಕ ರಾಜಪಕ್ಸ ತಮ್ಮ ಅಸಮಾಧಾನವನ್ನ ಟ್ವಿಟರ್‌ ಮೂಲಕ ಹೊರಹಾಕಿದ್ದಾರೆ. ಪ್ರಸ್ತುತ ಐಪಿಎಲ್‌ನಲ್ಲಿ ಭಾಗಿಯಾಗಿರೋ ಇವ್ರು, ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಮುಂಬೈ ಕೋಚ್‌ ಆಗಿರೋ ಜಯವರ್ಧನೆ ಟ್ವೀಟ್‌ ಮಾಡಿ, ಶ್ರೀಲಂಕಾದಲ್ಲಿ ತುರ್ತು ಪರಿಸ್ಥಿತಿ ಮತ್ತು ಕರ್ಫ್ಯೂ ಜಾರಿ ಮಾಡಿರೋದು ನೋಡಿ ನಂಗೆ ಬೇಜಾರಾಗ್ತಾ ಇದೆ. ತಮ್ಮ ಹಕ್ಕಿಗಾಗಿ ಹೋರಾಡ್ತಾ ಇರೋ ಜನರ ಬೇಡಿಕೆಗಳನ್ನ ಸರ್ಕಾರ ನಿರ್ಲಕ್ಷಿಸಬಾರ್ದು ಎಂದಿದ್ದಾರೆ. ಇನ್ನು ಭನುಕ ರಾಜಪಕ್ಸ, ಎರಡು ಕೋಟಿ ಜನರ ಧ್ವನಿ ಒಂದೇ ಆದಾಗ ಅದನ್ನ ಯಾರಿಂದಲೂ ಕಡೆಗಣಿಸೋಕೆ ಸಾ‍ಧ್ಯ ಇಲ್ಲ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply