ಜಮ್ಮು ಕಾಶ್ಮೀರದಲ್ಲಿ ಗ್ರೆನೇಡ್ ದಾಳಿ.. 15 ಮಂದಿಗೆ ಗಾಯ

ಜಮ್ಮು ಕಾಶ್ಮೀರದ ಸೋಪೋರ್​​ನಲ್ಲಿ ಉಗ್ರರು ಗ್ರೆನೇಡ್ ದಾಳಿ ನಡೆಸಿದ್ದಾರೆ. ಘಟನೆಯಲ್ಲಿ ಬರೋಬ್ಬರಿ 15 ಮಂದಿ ಸೈನಿಕರು ಸಾವನ್ನಪ್ಪಿದ್ದಾರೆ. ಶ್ರೀನಗರದ ಕರನ್​​ನಗರದಲ್ಲಿ 2 ದಿನಗಳ ಹಿಂದಷ್ಟೇ ನಡೆದಿದ್ದ ದಾಳಿಯಲ್ಲಿ 6 ಮಂದಿ ಸಿಆರ್​​​ಪಿಎಫ್ ಯೋಧರು ಗಾಯಗೊಂಡಿದ್ದರು. ಮೂಲಗಳ ಪ್ರಕಾರ ಇಂದು ನಾಗರಿಕರು ಬಸ್​​​​ಸ್ಟ್ಯಾಂಡ್​​ನಲ್ಲಿ ಬಸ್​​​ಗಾಗಿ ಕಾಯುತ್ತಾ ನಿಂತಿದ್ದಾಗ ಈ ಘಟನೆ ನಡೆದಿದೆ. ಯೂರೋಪಿಯನ್ ಒಕ್ಕೂಟದ 28 ಮಂದಿ ಸದಸ್ಯರು ಭಾರತಕ್ಕೆ ಬಂದಿದ್ದು, ನಾಳೆ ಜಮ್ಮು ಕಾಶ್ಮೀರಕ್ಕೆ ತೆರಳಲಿದ್ದಾರೆ. ಆದ್ರೆ ಅದಕ್ಕೂ ಒಂದು ದಿನ ಮುನ್ನ ಈ ಘಟನೆ ನಡೆದಿದೆ.

Contact Us for Advertisement

Leave a Reply