ಜಮ್ಮು ಕಾಶ್ಮೀರದ ಸೋಪೋರ್ನಲ್ಲಿ ಉಗ್ರರು ಗ್ರೆನೇಡ್ ದಾಳಿ ನಡೆಸಿದ್ದಾರೆ. ಘಟನೆಯಲ್ಲಿ ಬರೋಬ್ಬರಿ 15 ಮಂದಿ ಸೈನಿಕರು ಸಾವನ್ನಪ್ಪಿದ್ದಾರೆ. ಶ್ರೀನಗರದ ಕರನ್ನಗರದಲ್ಲಿ 2 ದಿನಗಳ ಹಿಂದಷ್ಟೇ ನಡೆದಿದ್ದ ದಾಳಿಯಲ್ಲಿ 6 ಮಂದಿ ಸಿಆರ್ಪಿಎಫ್ ಯೋಧರು ಗಾಯಗೊಂಡಿದ್ದರು. ಮೂಲಗಳ ಪ್ರಕಾರ ಇಂದು ನಾಗರಿಕರು ಬಸ್ಸ್ಟ್ಯಾಂಡ್ನಲ್ಲಿ ಬಸ್ಗಾಗಿ ಕಾಯುತ್ತಾ ನಿಂತಿದ್ದಾಗ ಈ ಘಟನೆ ನಡೆದಿದೆ. ಯೂರೋಪಿಯನ್ ಒಕ್ಕೂಟದ 28 ಮಂದಿ ಸದಸ್ಯರು ಭಾರತಕ್ಕೆ ಬಂದಿದ್ದು, ನಾಳೆ ಜಮ್ಮು ಕಾಶ್ಮೀರಕ್ಕೆ ತೆರಳಲಿದ್ದಾರೆ. ಆದ್ರೆ ಅದಕ್ಕೂ ಒಂದು ದಿನ ಮುನ್ನ ಈ ಘಟನೆ ನಡೆದಿದೆ.
Contact Us for Advertisement2019-10-28