masthmagaa.com:
ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ದಿಗ್ವಿಜಯ ಸಾಧಿಸಿದ ಕಾಂಗ್ರೆಸ್ ಪಕ್ಷಕ್ಕೆ ಕೇರಳ ರಾಜ್ಯದ ಕಾಂಗ್ರೆಸ್ ಸಂಸದ ಶಶಿ ತರೂರ್ ಎಚ್ಚರಿಕೆ ನೀಡಿದ್ದಾರೆ. ಕರ್ನಾಟಕ ರಾಜ್ಯದಲ್ಲಿ ಬಿಜೆಪಿಯನ್ನ ಮಣಿಸಿ ಕಾಂಗ್ರೆಸ್ ಪಕ್ಷ ಸಾಧಿಸಿದ ಗೆಲುವಿನಿಂದ ಆತ್ಮತೃಪ್ತಿ ಹೊಂದಬೇಡಿ. ರಾಜ್ಯದಿಂದ ರಾಜ್ಯಕ್ಕೆ ಹಾಗೂ ರಾಷ್ಟ್ರ ಮಟ್ಟದ ಚುನಾವಣೆಯಲ್ಲಿ ಮತದಾರರ ಭಾವನೆಗಳು, ಪ್ರಾಶಸ್ತ್ಯಗಳು ಬದಲಾಗುತ್ತವೆ ಅಂತ ಶಶಿ ತರೂರ್ ಹೇಳಿದ್ದಾರೆ. ಜೊತೆಗೆ 2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಕಳಪೆ ಪ್ರದರ್ಶನವನ್ನ ನೆನಪಿಸಿರುವ ಶಶಿ ತರೂರ್, 2019ರ ಲೋಕಸಭಾ ಚುನಾವಣೆಗೆ ಮುನ್ನ ಕಾಂಗ್ರೆಸ್ ಪಕ್ಷ ರಾಜಸ್ಥಾನ, ಮಧ್ಯ ಪ್ರದೇಶ ಹಾಗೂ ಛತ್ತೀಸ್ಗಢ ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿತ್ತು. ಆದರೆ, ಲೋಕಸಭಾ ಚುನಾವಣೆಯಲ್ಲಿ ಎಡವಿತು. ಸೋ ಯಾವುದೋ ಒಂದು ರಾಜ್ಯದಲ್ಲಿ ಪಕ್ಷಕ್ಕೆ ನೆರವಾದ ಸಂಗತಿಗಳು ರಾಷ್ಟ್ರ ಮಟ್ಟದಲ್ಲಿಯೂ ಪಕ್ಷದ ಕೈ ಹಿಡಿಯುತ್ತೆ ಅಂತ ಭಾವಿಸಬಾರದು ಅಂತ ಕಿವಿಮಾತು ಹೇಳಿದ್ದಾರೆ.
-masthmagaa.com
Contact Us for Advertisement