masthmagaa.com:
ಅಯೋಧ್ಯೆ ಶ್ರೀರಾಮ ಮಂದಿರದ ಉದ್ಘಾಟನೆ ಆಹ್ವಾನದ ಬಗ್ಗೆ AICC ರಾಷ್ಟ್ರೀಯ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಮಾತನಾಡಿದ್ದಾರೆ, ʻಹೌದು. ಬಿಜೆಪಿಯವ್ರು ನಮ್ಮನ್ನ ಇನ್ವೈಟ್ ಮಾಡಿದ್ದಾರೆ. ಇದಕ್ಕೆ ನಾವು ತುಂಬ ಕೃತಜ್ಞರಾಗಿದ್ದೇವೆʼ ಅಂತ ರಿಯಾಕ್ಟ್ ಮಾಡಿದ್ದಾರೆ. ಇನ್ನು ಈ ಬಗ್ಗೆ ಮಾತನಾಡಿರೋ ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ ಸಿಂಗ್, ʻಇದ್ರ ಬಗ್ಗೆ ಯಾವ್ದೇ ಆಕ್ಷೇಪ ಇರೋಕೆ ಸಾಧ್ಯಾನೇ ಇಲ್ಲ. ಈ ವಿಷಯದ ಬಗ್ಗೆ ಸೋನಿಯಾ ಗಾಂಧಿಯವ್ರು ಬಹಳ ಪಾಸಿಟಿವ್ ಆಗಿದ್ದಾರೆ. ಶ್ರೀರಾಮ ಮಂದಿರದ ಉದ್ಘಾಟನೆಗೆ ಒಂದಾ ಅವ್ರೇ ಹೋಗ್ತಾರೆ, ಇಲ್ಲಾ ಪಕ್ಷದ ಪ್ರತಿನಿಧಿ ಹೋಗ್ತಾರೆʼ ಅಂತ ಹೇಳಿದ್ದಾರೆ. ಜೊತೆಗೆ ʻಅವ್ರು (ಅಂದ್ರೆ ಬಿಜೆಪಿಯವ್ರು) ಖಂಡಿತವಾಗ್ಲೂ ನನ್ನನ್ನ ಇನ್ವೈಟ್ ಮಾಡಲ್ಲ. ಯಾಕಂದ್ರೆ ಅವ್ರು ನಿಜವಾದ ಭಕ್ತರನ್ನ ಇನ್ವೈಟ್ ಮಾಡ್ತಿಲ್ಲʼ ಅಂತ ಹೇಳಿ ಟೀಕಿಸಿದ್ದಾರೆ. ಅಂದ್ಹಾಗೆ ಕೆಲ ದಿನಗಳ ಹಿಂದಷ್ಟೇ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್, ತಮ್ಮ ಕಡೆಯಿಂದ ಅಂತ ಸೋನಿಯಾ ಗಾಂಧಿ ಮತ್ತು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವ್ರಿಗೆ ಇನ್ವಿಟಿಷನ್ ಕಳಿಸಿದ್ರು.
-masthmagaa.com
Contact Us for Advertisement