masthmagaa.com:
ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ನಡೆಯಲು ಒಂದು ವರ್ಷ ಬಾಕಿ ಇರುವಾಗಲೇ, ಅದಕ್ಕೆ ಪೂರಕ ತಯಾರಿ ನಡೆಸಲು ಬಿಜೆಪಿ ರೆಡಿಯಾಗಿದೆ. ತಳಮಟ್ಟದ ಪರಿಸ್ಥಿತಿ ತಿಳಿಯಲು ಮತ್ತು ರಾಜ್ಯ-ಕೇಂದ್ರ ಸರ್ಕಾರಗಳ ಕುರಿತು ಜನಾಭಿಪ್ರಾಯ ಸಂಗ್ರಹಿಸಲು ಮೂರು ತಂಡಗಳನ್ನು ರಚಿಸಿದೆ. ಈ ತಂಡಗಳು ಮುಂದಿನ ಎರಡು ವಾರ ರಾಜ್ಯದ ಉದ್ದಗಲಕ್ಕೂ ಪ್ರಯಾಣಿಸಿ ಮಾಹಿತಿ ಸಂಗ್ರಹಿಸಲಿದೆ. ಮೊದಲ ತಂಡದ ನೇತೃತ್ವವನ್ನ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ಗೆ ನೀಡಲಾಗಿದೆ. ಇದರಲ್ಲಿ ಮಾಜಿ ಸಿಎಂ ಯಡಿಯೂರಪ್ಪ, ಸಿಟಿ ರವಿ, ಆರ್. ಅಶೋಕ್ ಮುಂತಾದವರು ಇರಲಿದ್ದಾರೆ. ಮತ್ತೆರಡು ತಂಡಗಳ ನೇತೃತ್ವವನ್ನ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮತ್ತು ಸಿಎಂ ಬಸವರಾಜ ಬೊಮ್ಮಾಯಿ ವಹಿಸಲಿದ್ದಾರೆ. ಎಲ್ಲಾ ತಂಡಗಳಲ್ಲೂ ಬಿಜೆಪಿ ಸಂಸದರು, ಶಾಸಕರು ಸೇರಿದಂತೆ ಏಳರಿಂದ ಎಂಟು ನಾಯಕರು ಇರಲಿದ್ದಾರೆ.
-masthmagaa.com
Contact Us for Advertisement