ಗ್ರೌಂಡ್​ ರಿಪೋರ್ಟ್​ ತಿಳಿಯಲು 3 ತಂಡದೊಂದಿಗೆ ಅಖಾಡಕ್ಕಿಳಿದ ರಾಜ್ಯ ಬಿಜೆಪಿ!

masthmagaa.com:

ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ನಡೆಯಲು ಒಂದು ವರ್ಷ ಬಾಕಿ ಇರುವಾಗಲೇ, ಅದಕ್ಕೆ ಪೂರಕ ತಯಾರಿ ನಡೆಸಲು ಬಿಜೆಪಿ ರೆಡಿಯಾಗಿದೆ. ತಳಮಟ್ಟದ ಪರಿಸ್ಥಿತಿ ತಿಳಿಯಲು ಮತ್ತು ರಾಜ್ಯ-ಕೇಂದ್ರ ಸರ್ಕಾರಗಳ ಕುರಿತು ಜನಾಭಿಪ್ರಾಯ ಸಂಗ್ರಹಿಸಲು ಮೂರು ತಂಡಗಳನ್ನು ರಚಿಸಿದೆ. ಈ ತಂಡಗಳು ಮುಂದಿನ ಎರಡು ವಾರ ರಾಜ್ಯದ ಉದ್ದಗಲಕ್ಕೂ ಪ್ರಯಾಣಿಸಿ ಮಾಹಿತಿ ಸಂಗ್ರಹಿಸಲಿದೆ. ಮೊದಲ ತಂಡದ ನೇತೃತ್ವವನ್ನ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್​ ಸಿಂಗ್​ಗೆ ನೀಡಲಾಗಿದೆ. ಇದರಲ್ಲಿ ಮಾಜಿ ಸಿಎಂ ಯಡಿಯೂರಪ್ಪ, ಸಿಟಿ ರವಿ, ಆರ್​. ಅಶೋಕ್​ ಮುಂತಾದವರು ಇರಲಿದ್ದಾರೆ. ಮತ್ತೆರಡು ತಂಡಗಳ ನೇತೃತ್ವವನ್ನ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್​ ಕುಮಾರ್ ಕಟೀಲ್​ ಮತ್ತು ಸಿಎಂ ಬಸವರಾಜ ಬೊಮ್ಮಾಯಿ ವಹಿಸಲಿದ್ದಾರೆ. ಎಲ್ಲಾ ತಂಡಗಳಲ್ಲೂ ಬಿಜೆಪಿ ಸಂಸದರು, ಶಾಸಕರು ಸೇರಿದಂತೆ ಏಳರಿಂದ ಎಂಟು ನಾಯಕರು ಇರಲಿದ್ದಾರೆ.

-masthmagaa.com

Contact Us for Advertisement

Leave a Reply