masthmagaa.com:
ಬಕ್ರೀದ್ ಹಿನ್ನೆಲೆ ಮೂರು ದಿನಗಳ ಕಾಲ ಕೊರೋನಾ ನಿರ್ಬಂಧಗಳಿಂದ ವಿನಾಯ್ತಿ ನೀಡಿರೋ ಕೇರಳ ಸರ್ಕಾರದ ನಿರ್ಧಾರವನ್ನ ಪ್ರಶ್ನಿಸಿ ಸುಪ್ರೀಂಕೋರ್ಟ್ಗೆ ಅರ್ಜಿಯೊಂದು ಸಲ್ಲಿಕೆಯಾಗಿದೆ. ಇದರ ವಿಚಾರಣೆ ನಡೆಸಿದ ಕೋರ್ಟ್ ಕೇರಳ ಸರ್ಕಾರ ಇವತ್ತೇ ತನ್ನ ಪ್ರತಿಕ್ರಿಯೆಯನ್ನ ಸಲ್ಲಿಸುವಂತೆ ತಿಳಿಸಿದೆ. ನಾಳೆ ಮತ್ತೆ ಈ ಅರ್ಜಿಯ ವಿಚಾರಣೆ ನಡೆಯಲಿದೆ. ಕೇರಳ ಸರ್ಕಾರದ ನಿರ್ಧಾರವನ್ನ ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಕೂಡ ಖಂಡಿಸಿತ್ತು. ಅತ್ತ ಅಸ್ಸಾಂನಲ್ಲಿ ಬಕ್ರೀದ್ ಹಬ್ಬವನ್ನ ಎಲ್ಲರೂ ಮನೆಯಲ್ಲೇ ಆಚರಿಸುವಂತೆ ಮಾರ್ಗಸೂಚಿ ಹೊರಡಿಸಲಾಗಿದೆ. ಮಸೀದಿಗಳಲ್ಲಿ ಧಾರ್ಮಿಕ ಮುಖಂಡರು ಸೇರಿದಂತೆ ಗರಿಷ್ಟ ಐದು ಜನ ಮಾತ್ರ ಪ್ರಾರ್ಥನೆ ಮಾಡುವಂತೆ ಸೂಚಿಸಲಾಗಿದೆ.
-masthmagaa.com
Contact Us for Advertisement