ಬಕ್ರೀದ್​​ಗೆ ರಿಲೀಫ್​​​ ನೀಡಿದ ಕೇರಳ ಸರ್ಕಾರ ವಿರುದ್ಧ ‘ಸುಪ್ರೀಂ’ಗೆ ಅರ್ಜಿ

masthmagaa.com:

ಬಕ್ರೀದ್​ ಹಿನ್ನೆಲೆ ಮೂರು ದಿನಗಳ ಕಾಲ ಕೊರೋನಾ ನಿರ್ಬಂಧಗಳಿಂದ ವಿನಾಯ್ತಿ ನೀಡಿರೋ ಕೇರಳ ಸರ್ಕಾರದ ನಿರ್ಧಾರವನ್ನ ಪ್ರಶ್ನಿಸಿ ಸುಪ್ರೀಂಕೋರ್ಟ್​ಗೆ ಅರ್ಜಿಯೊಂದು ಸಲ್ಲಿಕೆಯಾಗಿದೆ. ಇದರ ವಿಚಾರಣೆ ನಡೆಸಿದ ಕೋರ್ಟ್​ ಕೇರಳ ಸರ್ಕಾರ ಇವತ್ತೇ ತನ್ನ ಪ್ರತಿಕ್ರಿಯೆಯನ್ನ ಸಲ್ಲಿಸುವಂತೆ ತಿಳಿಸಿದೆ. ನಾಳೆ ಮತ್ತೆ ಈ ಅರ್ಜಿಯ ವಿಚಾರಣೆ ನಡೆಯಲಿದೆ. ಕೇರಳ ಸರ್ಕಾರದ ನಿರ್ಧಾರವನ್ನ ಇಂಡಿಯನ್ ಮೆಡಿಕಲ್ ಅಸೋಸಿಯೇಷನ್​ ಕೂಡ ಖಂಡಿಸಿತ್ತು. ಅತ್ತ ಅಸ್ಸಾಂನಲ್ಲಿ ಬಕ್ರೀದ್ ಹಬ್ಬವನ್ನ ಎಲ್ಲರೂ ಮನೆಯಲ್ಲೇ ಆಚರಿಸುವಂತೆ ಮಾರ್ಗಸೂಚಿ ಹೊರಡಿಸಲಾಗಿದೆ. ಮಸೀದಿಗಳಲ್ಲಿ ಧಾರ್ಮಿಕ ಮುಖಂಡರು ಸೇರಿದಂತೆ ಗರಿಷ್ಟ ಐದು ಜನ ಮಾತ್ರ ಪ್ರಾರ್ಥನೆ ಮಾಡುವಂತೆ ಸೂಚಿಸಲಾಗಿದೆ.

-masthmagaa.com

Contact Us for Advertisement

Leave a Reply