masthmagaa.com:
ಪಶ್ಚಿಮ ಬಂಗಾಳದಲ್ಲಿ ಮಮತಾ ಸೋಲಿಸಿ ಬಿಜೆಪಿಯ ಹೊಸ ಸ್ಟಾರ್ ಆಗಿರೋ ಪ್ರತಿಕ್ಷ ನಾಯಕ ಸುವೇಂಧು ಅಧಿಕಾರಿ ಪ್ರಧಾನಿ ಮೋದಿಗೆ ಲೆಟರ್ ಬರೆದಿದ್ದಾರೆ. ಪಕ್ಕದ ಬಾಂಗ್ಲಾದೇಶದಲ್ಲಿ ದುರ್ಗಾ ಪೂಜೆ ವೇಳೆ ದಾಳಿ ನಡೀತಿದೆ. ಪಂಡಾಲು, ದೇಗುಲಗಳ ಧ್ವಂಸ ನಡೀತಿದೆ. ಬಾಂಗ್ಲಾದಲ್ಲಿರೋ ಸನಾತನಿಗಳು ಕಷ್ಟದಲ್ಲಿದ್ದಾರೆ. ಅವರನ್ನ ರಕ್ಷಿಸಲು ನೀವು ಈ ಕೂಡಲೇ ಏನಾದ್ರೂ ಕ್ರಮ ಕೈಗೊಳ್ಳಬೇಕು ಅಂತ ಲೆಟರ್ ನಲ್ಲಿ ಆಗ್ರಹ ಮಾಡಿದ್ದಾರೆ. ಈ ಸಂಬಂಧ ಪ್ರತಿಕ್ರಿಯೆ ನಿಡಿರೋ ಭಾರತದ ವಿದೇಶಾಂಗ ಇಲಾಖೆ, ನಾವು ಈ ವಿಚಾರ ಸಂಬಂಧ ಬಾಂಗ್ಲಾದೇಶದೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ. ಅಲ್ಲಿನ ಸರ್ಕಾರವೂ ಸೂಕ್ತ ಕ್ರಮ ಕೈಗೊಳ್ತಿದೆ ಅಂತ ಹೇಳಿದೆ.
-masthmagaa.com
Contact Us for Advertisement