24 ವರ್ಷದ ದಲಿತ ವ್ಯಕ್ತಿಯನ್ನು ಹೊಡೆದು ಹೊಡೆದು ಕೊಂದ ಜನ..!

ಚೆನ್ನೈ: ತೆರೆದ ಮೈದಾನದಲ್ಲಿ ಮಲ ವಿಸರ್ಜನೆ ಮಾಡಿದ್ದಕ್ಕೆ ಸಾರ್ವನಿಕರು ಸೇರಿ  ದಲಿತ 24 ವರ್ಷದ ವ್ಯಕ್ತಿಯೊಬ್ಬರನ್ನು ಹೊಡೆದು ಕೊಂದಿದ್ದಾರೆ. ತಮಿಳುನಾಡಿನ ಚೆನ್ನೈನ ವಿಲ್ಲುಪುರಂನಲ್ಲಿ ಈ ಮನುಷ್ಯ ಕುಲವೇ ತಲೆ ತಗ್ಗಿಸೋ ಘಟನೆ ವರದಿಯಾಗಿದೆ. ಶಕ್ತಿವೇಲ್ ಎಂಬಾತ ವಿಲ್ಲುಪುರಂನ ಪೆಟ್ರೋಲ್ ಬಂಕ್​ನಲ್ಲಿ ಕೆಲಸ ಮಾಡುತ್ತಿದ್ದ. ಕಳೆದ ಬುಧವಾರ ಕೆಲಸಕ್ಕೆ ಹೋಗುವಾಗ ಈತ ಮೈದಾನವೊಂದಲ್ಲಿ ಮಲವಿಸರ್ಜನೆ ಮಾಡಿದ್ದಾನೆ.

ಇದನ್ನು ಗಮನಿಸಿದ ಮಹಿಳೆಯೊಬ್ಬರು, ಜೋರಾಗಿ ಕೂಗಿಕೊಂಡಿದ್ದಾರೆ. ಅಲ್ಲದೆ ವ್ಯಕ್ತಿ ಮೈದಾನದಲ್ಲಿ ಮಲ ವಿಸರ್ಜನೆ ಮಾಡಿದ್ದಲ್ಲದೆ, ನನ್ನ ಜೊತೆ ಅಸಭ್ಯವಾಗಿ ವರ್ತಿಸಿದ್ದಾನೆ ಅಂತ ಆರೋಪಿಸಿದ್ದಾರೆ. ಈ ವೇಳೆ ಜನರೆಲ್ಲಾ ಸೇರಿದ್ದು ನೋಡಿ ಶಕ್ತಿವೇಲ್ ಓಡಲು ಯತ್ನಿಸಿದ. ಆದ್ರೆ ಶಕ್ತಿವೇಲ್​​ನನ್ನು ಹಿಡಿದು ಕೈ, ಕಾಲು ಕಟ್ಟಿದ ಮಾನವೀಯತೆ ಸತ್ತ ಜನ, ಹಿಗ್ಗಾಮುಗ್ಗ ಥಳಿಸಿದ್ದಾರೆ. ನಂತರ ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಶಕ್ತಿವೇಲ್ ಗಂಭೀರವಾಗಿ ಗಾಯಗೊಂಡಿದ್ದರೂ ಆಸ್ಪತ್ರೆಗೆ ಸಾಗಿಸಲಿಲ್ಲ. ಬದಲಾಗಿ ಮರುದಿನ ಪೊಲೀಸ್ ಠಾಣೆಗೆ ಬರುವಂತೆ ಸೂಚಿಸಿ, ವಾಪಸ್ ತೆರಳಿದ್ದಾರೆ. ಇದಾದ ಸ್ವಲ್ಪ ಹೊತ್ತಿನ ಬಳಿಕ ಘಟನಾ ಸ್ಥಳಕ್ಕೆ ಶಕ್ತಿವೇಲ್ ಸಹೋದರಿ ಬಂದಿದ್ದಾರೆ. ಅದ್ರೆ ಪ್ರಜ್ಞೆ ಕಳೆದುಕೊಂಡಿದ್ದ ಶಕ್ತಿವೇಲ್, ಸ್ವಲ್ಪ ಹೊತ್ತಿನ ಬಳಿಕ ಜೀವವನ್ನೇ ಬಿಟ್ಟಿದ್ದಾನೆ.

ಶಕ್ತಿವೇಲ್ ಜೀವ ಹೋದ ಬಳಿಕ ಎಚ್ಚೆತ್ತ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಅಲ್ಲದೆ ಪ್ರಕರಣ ಸಂಬಂಧ ಈಗಾಗಲೇ 7 ಮಂದಿಯನ್ನು ಅರೆಸ್ಟ್ ಕೂಡ ಮಾಡಿದ್ದಾರೆ.

Contact Us for Advertisement

Leave a Reply