ಮಣಿಪುರ್‌ ಸಿಎಂ ಕಾರ್ಯಕ್ರಮದಲ್ಲಿ ಹಿಂಸಾಚಾರ, 144 ಸೆಕ್ಷನ್‌ ಜಾರಿ!

masthmagaa.com:

ಮಣಿಪುರದ ಚುರಾಚಂದ್​ಪುರನಲ್ಲಿ ಹಿಂಸಾಚಾರ ಭುಗಿಲೆದ್ದಿದೆ. ಮಣಿಪುರ ಸಿಎಂ ಎನ್​ ಬಿರೇನ್​ ಸಿಂಗ್ ಅವರು ಉದ್ಘಾಟಿಸಬೇಕಿದ್ದ ಜಿಮ್‌ ಹಾಗೂ ಕ್ರೀಡಾ ಮೂಲಸೌಕರ್ಯಗಳಿಗೆ ಉದ್ರಿಕ್ತ ಗುಂಪೊಂದು ಬೆಂಕಿ ಹಚ್ಚಿದೆ. ಸ್ಥಳದಲ್ಲಿ ಉದ್ವಿಗ್ನ ವಾತಾವರಣ ಉಂಟಾಗಿದ್ದು, ಇಂಟರ್ನೆಟ್‌ ಸೇವೆಯನ್ನ ಸ್ಥಗಿತಗೊಳಿಸಲಾಗಿದೆ. ಸೆಕ್ಷನ್‌ 144 ಜಾರಿ ಮಾಡಲಾಗಿದೆ. ಅಲ್ಲಿನ ಸ್ಥಳೀಯ ಬುಡಕಟ್ಟು ಸಂಘಟನೆಯೊಂದು ಈ ಹಿಂಸಾಚಾರ ನಡೆಸುತ್ತಿದ್ದು, ಸರ್ಕಾರದ ಸಂರಕ್ಷಿತ ಮೀಸಲು ಅರಣ್ಯ ಹಾಗೂ ಕೆರೆಗಳ ಸಮೀಕ್ಷೆಯನ್ನ ವಿರೋಧಿಸುತ್ತಿದೆ ಅಂತ ಹೇಳಲಾಗ್ತಿದೆ.

-masthmagaa.com

Contact Us for Advertisement

Leave a Reply