masthmagaa.com:
ತೆಲುಗು ನಿರ್ದೇಶಕ ವೆಂಕಟೇಶ್ ಮಹಾ ಕೆಜಿಎಫ್ ಚಿತ್ರದ ಬಗ್ಗೆ ಸಂದರ್ಶನವೊಂದರಲ್ಲಿ ಕೆಜಿಎಫ್ ತಲೆ ಬುಡ ಇಲ್ಲದ ಸಿನಿಮಾ ಎಂದು ಮಾತನಾಡಿದ ವಿಡಿಯೋ ಈಗ ಎಲ್ಲಡೆ ವೈರಲ್ ಆಗಿದೆ. ಈ ವಿಡಿಯೋ ನೋಡಿದ ಅಭಿಮಾನಿಗಳು ವೆಂಕಟೇಶ್ ಮಹಾ ವಿರುದ್ಧ ಕಿಡಿಕಾರ್ತಾ ಇದಾರೆ. ಕನ್ನಡ ಚಿತ್ರರಂಗವನ್ನೇ ಇಡೀ ದೇಶ ಹಿಂತಿರುಗಿ ನೋಡುವಂತೆ ಮಾಡಿದ ಚಿತ್ರ ಕೆಜಿಎಫ್ ಚಾಪ್ಟರ್ 1 ಮತ್ತು ಚಾಪ್ಟರ್ 2 , ದೇಶವ್ಯಾಪಿಯಲ್ಲಿ ಸುದ್ದಿಯಾದಂತ ಚಿತ್ರ. ಕೆಜಿಎಫ್ ಚಾಪ್ಟರ್ 1 ಮತ್ತು ಚಾಪ್ಟರ್ 2 ನ್ನು ಪ್ರಶಾಂತ್ ನೀಲ್ ಅವರು ನಿರ್ದೇಶಿಸಿದ್ದಾರೆ. ಅಭಿಮಾನಿಗಳಿಗೆ ಮೋಡಿಮಾಡಿದಂತ ಚಿತ್ರ ಕೆಜಿಎಫ್ ಚಾಪ್ಟರ್ 1 ಮತ್ತು ಚಾಪ್ಟರ್ 2. ಇಡೀ ಭಾರತಕ್ಕೆ ಇದು ಹಮ್ಮೆ ಪಡುವಂತ ವಿಚಾರ ಕೂಡ ಹೌದು. ಆದರೆ ಕೆಜಿಎಫ್ ಚಾಪ್ಟರ್ 2 ಬಗ್ಗೆ ತೆಲುಗು ನಿರ್ದೇಶಕ ಅಪಹಾಸ್ಯ ಮಾಡಿದ್ದಲ್ಲದೇ, ಹೀಯಾಳಿಸಿದ್ದಾರೆ. ಇದಕ್ಕೆ ಎಲ್ಲೆಡೆ ತೀವ್ರ ವಿರೋಧ ವ್ಯಕ್ತವಾಗಿದೆ. ಕನ್ನಡಿಗರು ಮಾತ್ರವಲ್ಲದೇ ತೆಲುಗು ಅಭಿಮಾನಿಗಳು ಕೂಡ ಇವರ ಬಗ್ಗೆ ತೀವ್ರ ವಿರೋಧ ಹೊರಹಾಕಿದ್ದಾರೆ. ಅವರು ಸಿನಿಮಾದ ಬಗ್ಗೆ ಮಾತನಾಡಿದ ವಿಡಿಯೋ ಸದ್ಯ ಎಲ್ಲಾ ಸಾಮಾಜಿಕ ಜಾಲತಾಣಗಳಲ್ಲೂ ವೈರಲ್ ಆಗ್ತಿದೆ. ಈ ವಿಡಿಯೋದಲ್ಲಿ ವೆಂಕಟೇಶ್ ಮಹಾ ಅವರು ಸಿನಿಮಾದ ಹೆಸರನ್ನ ಹೇಳದೇ ಇಡೀ ಸಿನಿಮಾದ ಸ್ಟೋರಿಯನ್ನ ಹೇಳಿ ಮಾತನಾಡಿದ್ದಾರೆ. “ಯಾವ ಅಮ್ಮ ಆದ್ರು ಕೂಡ ಮಗನಿಗೆ ಒಳ್ಳೆದ್ ಮಾಡು ಅಂತ ಹೇಳ್ತಾರೆ ಆದರೆ ಈ ಸಿನಿಮಾದಲ್ಲಿ ಅಷ್ಟು ಚಿನ್ನ ತಗೊಂಡ್ ಬಾ, ಇಷ್ಟು ಚಿನ್ನ ತಗೊಂಡ್ ಬಾ ಅಂತ ಹೇಳಿದಾರೆ, ಹೀರೋ ಅಮ್ಮನಿಗೋಸ್ಕರ ಕೊಲೆ, ಸುಲಿಗೆ ಮಾಡಿ ಹಣ ಮತ್ತೆ ಚಿನ್ನವನ್ನ ತರ್ತಾನೆ. ಇಂತ ಅಮ್ಮ ಎಲ್ಲಿದ್ದಾರೆ ಅಂತ ನನಗೂ ತೋರಿಸಿ, ಇಂತ ತಲೆ ಬುಡ ಇಲ್ಲದ ಸಿನಿಮಾಗಳನ್ನ ನಾವು ಗೆಲ್ಲಿಸ್ತೀವಿ, ಎಲ್ಲಾ ಕಡೆ ಇದ್ರ ಬಗ್ಗೆ ಮಾತಾಡ್ತೀವಿ” ಅಂತ ಹೇಳಿದ್ದಾರೆ. ಅದೇ ಸಂದರ್ಶನದಲ್ಲಿದ್ದ ಉಳಿದವರು, ಇವರಾಡುವ ಮಾತುಗಳನ್ನ ಕೇಳಿ ನಗಾಡುತ್ತಿರುವ ದೃಶ್ಯ ಇದಾಗಿದೆ. ಸಿನಿಮಾದ ಬಗ್ಗೆ ಅಭಿಪ್ರಾಯವನ್ನ ಹೇಳೊದು ತಪ್ಪಲ್ಲ. ಮೂವಿ ಚೆನ್ನಾಗಿದೆ, ಚೆನ್ನಾಗಿಲ್ಲ, ಈ ರೀತಿ ಚೇಂಜಸ್ ಇದ್ದಿದ್ರೆ ಇನ್ನೂ ಚೆನ್ನಾಗಿರ್ತಾ ಇತ್ತು ಅಂತೆಲ್ಲಾ ಹೇಳೊದು ದೊಡ್ಡ ಮ್ಯಾಟರ್ ಅಲ್ಲ. ಆದರೆ ದೇಶಕ್ಕೆ ಹೆಗ್ಗಳಿಕೆ ತಂದ ಮೂವಿ ಬಗ್ಗೆ, ಆ ಮೂವಿಯ ಹೀರೋ ಬಗ್ಗೆ ಈ ಮಾತಾಡೋದು ತಪ್ಪು, ವೆಂಕಟೇಶ್ ಮಹಾ ಅವರು ಕೆಜಿಎಫ್ ಚಿತ್ರತಂಡಕ್ಕೆ ಕ್ಷಮೆ ಕೇಳ್ಬೇಕು ಅಂತ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸ್ತಾ ಇದಾರೆ. ಕೆಜಿಎಫ್ ತಂಡ ಇದಕ್ಕೆ ಯಾವುದೇ ಪ್ರತ್ಯುತ್ತರ ನೀಡಿಲ್ಲ.
-masthmagaa.com
Contact Us for Advertisement