masthmagaa.com:
ಯುಕ್ರೇನ್ ವಿರುದ್ಧದ ಯುದ್ಧ ತಾರ್ಕಿಕ ಅಂತ್ಯ ಕಾಣಿಸ್ತಿಲ್ಲ. ಮತ್ತೊಂದ್ಕಡೆ ಪುಟಿನ್ನ್ನು ವಿಲನ್ ರೀತಿಯಲ್ಲಿ ಬಿಂಬಿಸಲಾಗ್ತಿದೆ. ರಷ್ಯಾದಲ್ಲೇ ಅವರ ವಿರುದ್ದ ಪ್ರತಿಭಟನೆ ನಡೀತಿದ್ದು, ಸಾವಿರಾರು ಜನ ಅರೆಸ್ಟ್ ಆಗಿದ್ದಾರೆ. ಇದ್ರ ನಡುವೆಯೇ ವ್ಲಾಡಿಮಿರ್ ಪುಟಿನ್ ಬೃಹತ್ ರ್ಯಾಲಿ ನಡೆಸಿದ್ದಾರೆ. ಮಾಸ್ಕೋದಲ್ಲಿರೋ ಲುಝ್ನಿಕಿ ವರ್ಲ್ಡ್ ಕಪ್ ಸ್ಟೇಡಿಯಂನಲ್ಲಿ ನಡೆದ ಈ ಸಮಾರಂಭದಲ್ಲಿ ಪುಟಿನ್ ಮಾತಾಡಿದ್ದಾರೆ. ಹತ್ತಾರು ಸಾವಿರ ಜನ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ ರಷ್ಯಾದ ಬಾವುಟ ಮತ್ತು ಯುಕ್ರೇನ್ ಆಕ್ರಮಣದ ಸಂಕೇತವಾದ ಝಡ್ ಅನ್ನೋ ಸಿಂಬಲ್ ಇರೋ ಬ್ಯಾನರ್ ಹಿಡಿದು ಯುಕ್ರೇನ್ ಆಕ್ರಮಣವನ್ನ ಬೆಂಬಲಿಸಿದ್ದಾರೆ. ಯುಕ್ರೇನ್ ಯುದ್ಧದ ಬಳಿಕ ಪಾಶ್ಚಿಮಾತ್ಯ ದೇಶಗಳು ಹೇರಿರೋ ನಿರ್ಬಂಧಗಳಿಂದ ರಷ್ಯಾದ ಆರ್ಥಿಕತೆ ನೆಲಕ್ಕಚ್ಚಿ ಹೋಗ್ತಿದೆ. ಆದ್ರೂ ಕೂಡ ಪುಟಿನ್ ಶೋಕಿಗೇನೂ ಕಮ್ಮಿ ಆಗಿಲ್ಲ. ಈ ಕಾರ್ಯಕ್ರಮಕ್ಕೆ 10 ಸಾವಿರ ಯೂರೋ ಅಂದ್ರೆ ಭಾರತದ ರೂಪಾಯಿ ಲೆಕ್ಕದಲ್ಲಿ 8.40 ಲಕ್ಷ ರೂಪಾಯಿ ಮೊತ್ತದ ಲೋರೋ ಪಿಯಾನಾ ಜಾಕೆಟ್ ಹಾಕ್ಕೊಂಡು ಬಂದಿದ್ರು. ಈ ವೇಳೆ ಮಾತನಾಡಿದ ಪುಟಿನ್, 2014ರಲ್ಲಿ ಕ್ರೈಮಿಯಾವನ್ನು ವಶಕ್ಕೆ ಪಡೆದ ವರ್ಷಾಚರಣೆ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮವನ್ನು ಮಾಡ್ತಿದ್ದೀವಿ. ಅವತ್ತು ಕ್ರೈಮಿಯಾವನ್ನು ನಾಝಿಗಳಿಂದ ಮುಕ್ತಗೊಳಿಸಿದ್ವಿ. ಈಗ ಯುಕ್ರೇನ್ನಲ್ಲಿ ನಮ್ಮ ವೀರಯೋಧರು ಹೋರಾಟ ನಡೆಸ್ತಿದ್ದಾರೆ ಅಂತ ಹೇಳಿದ್ರು. ಆಗ ಅಲ್ಲಿ ನೆರೆದಿದ್ದ ಜನ ರಷ್ಯಾ ರಷ್ಯಾ ರಷ್ಯಾ ಅಂತ ಕೂಗ್ತಿದ್ರು. ಈ ವೇಳೆ ತಮ್ಮ ದಾಳಿಯನ್ನು ಮತ್ತೆ ಸಮರ್ಥಿಸಿಕೊಂಡ ಪುಟಿನ್, ಯುಕ್ರೇನ್ ಜನತೆಯನ್ನು ರಕ್ಷಿಸಲು, ನರಮೇಧ ತಪ್ಪಿಸಲು ಈ ಮಿಲಿಟರಿ ಕಾರ್ಯಾಚರಣೆ ನಡೆಸಿದ್ದೀವಿ ಅಂತ ಹೇಳಿದ್ದಾರೆ.ಯುಕ್ರೇನ್ ವಿರುದ್ಧದ ಯುದ್ಧ ತಾರ್ಕಿಕ ಅಂತ್ಯ ಕಾಣಿಸ್ತಿಲ್ಲ. ಮತ್ತೊಂದ್ಕಡೆ ಪುಟಿನ್ನ್ನು ವಿಲನ್ ರೀತಿಯಲ್ಲಿ ಬಿಂಬಿಸಲಾಗ್ತಿದೆ. ರಷ್ಯಾದಲ್ಲೇ ಅವರ ವಿರುದ್ದ ಪ್ರತಿಭಟನೆ ನಡೀತಿದ್ದು, ಸಾವಿರಾರು ಜನ ಅರೆಸ್ಟ್ ಆಗಿದ್ದಾರೆ. ಇದ್ರ ನಡುವೆಯೇ ವ್ಲಾಡಿಮಿರ್ ಪುಟಿನ್ ಬೃಹತ್ ರ್ಯಾಲಿ ನಡೆಸಿದ್ದಾರೆ. ಮಾಸ್ಕೋದಲ್ಲಿರೋ ಲುಝ್ನಿಕಿ ವರ್ಲ್ಡ್ ಕಪ್ ಸ್ಟೇಡಿಯಂನಲ್ಲಿ ನಡೆದ ಈ ಸಮಾರಂಭದಲ್ಲಿ ಪುಟಿನ್ ಮಾತಾಡಿದ್ದಾರೆ. ಹತ್ತಾರು ಸಾವಿರ ಜನ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ ರಷ್ಯಾದ ಬಾವುಟ ಮತ್ತು ಯುಕ್ರೇನ್ ಆಕ್ರಮಣದ ಸಂಕೇತವಾದ ಝಡ್ ಅನ್ನೋ ಸಿಂಬಲ್ ಇರೋ ಬ್ಯಾನರ್ ಹಿಡಿದು ಯುಕ್ರೇನ್ ಆಕ್ರಮಣವನ್ನ ಬೆಂಬಲಿಸಿದ್ದಾರೆ. ಯುಕ್ರೇನ್ ಯುದ್ಧದ ಬಳಿಕ ಪಾಶ್ಚಿಮಾತ್ಯ ದೇಶಗಳು ಹೇರಿರೋ ನಿರ್ಬಂಧಗಳಿಂದ ರಷ್ಯಾದ ಆರ್ಥಿಕತೆ ನೆಲಕ್ಕಚ್ಚಿ ಹೋಗ್ತಿದೆ. ಆದ್ರೂ ಕೂಡ ಪುಟಿನ್ ಶೋಕಿಗೇನೂ ಕಮ್ಮಿ ಆಗಿಲ್ಲ. ಈ ಕಾರ್ಯಕ್ರಮಕ್ಕೆ 10 ಸಾವಿರ ಯೂರೋ ಅಂದ್ರೆ ಭಾರತದ ರೂಪಾಯಿ ಲೆಕ್ಕದಲ್ಲಿ 8.40 ಲಕ್ಷ ರೂಪಾಯಿ ಮೊತ್ತದ ಲೋರೋ ಪಿಯಾನಾ ಜಾಕೆಟ್ ಹಾಕ್ಕೊಂಡು ಬಂದಿದ್ರು. ಈ ವೇಳೆ ಮಾತನಾಡಿದ ಪುಟಿನ್, 2014ರಲ್ಲಿ ಕ್ರೈಮಿಯಾವನ್ನು ವಶಕ್ಕೆ ಪಡೆದ ವರ್ಷಾಚರಣೆ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮವನ್ನು ಮಾಡ್ತಿದ್ದೀವಿ. ಅವತ್ತು ಕ್ರೈಮಿಯಾವನ್ನು ನಾಝಿಗಳಿಂದ ಮುಕ್ತಗೊಳಿಸಿದ್ವಿ. ಈಗ ಯುಕ್ರೇನ್ನಲ್ಲಿ ನಮ್ಮ ವೀರಯೋಧರು ಹೋರಾಟ ನಡೆಸ್ತಿದ್ದಾರೆ ಅಂತ ಹೇಳಿದ್ರು. ಆಗ ಅಲ್ಲಿ ನೆರೆದಿದ್ದ ಜನ ರಷ್ಯಾ ರಷ್ಯಾ ರಷ್ಯಾ ಅಂತ ಕೂಗ್ತಿದ್ರು. ಈ ವೇಳೆ ತಮ್ಮ ದಾಳಿಯನ್ನು ಮತ್ತೆ ಸಮರ್ಥಿಸಿಕೊಂಡ ಪುಟಿನ್, ಯುಕ್ರೇನ್ ಜನತೆಯನ್ನು ರಕ್ಷಿಸಲು, ನರಮೇಧ ತಪ್ಪಿಸಲು ಈ ಮಿಲಿಟರಿ ಕಾರ್ಯಾಚರಣೆ ನಡೆಸಿದ್ದೀವಿ ಅಂತ ಹೇಳಿದ್ದಾರೆ.
-masthmagaa.com
Contact Us for Advertisement