ಲಸಿಕೆ ಹಾಕಿಸಿಕೊಳ್ಳದ ಕುಡುಕರಿಗೆ ಶಾಕ್​! ಈಗ ‘ಎಣ್ಣೆ’ಗೆ ಲಸಿಕೆ ಬೇಕೇಬೇಕು!

masthmagaa.com:

ತಮಿಳುನಾಡಿನ ನೀಲಗಿರಿಯಲ್ಲಿ ಕುಡುಕರು ವ್ಯಾಕ್ಸಿನ್ ಹಾಕಿಕೊಳ್ತಿರಲಿಲ್ಲವಂತೆ. ಹೀಗಾಗಿ ಜಿಲ್ಲಾಧಿಕಾರಿ ಒಂದು ಆದೇಶ ಹೊರಡಿಸಿದ್ದಾರೆ. ‘ವ್ಯಾಕ್ಸಿನ್ ಹಾಕಿಸಿಕೊಳ್ಳಿ ಅಂದ್ರೆ ನಮಗೆ ಕುಡಿಯೋಕಿದೆ ಅಂತಿದ್ರು. ಈಗ ಅವ್ರು ಕುಡಿಯಲು ಮದ್ಯ ಸಿಗಬೇಕು ಅಂದ್ತೆ ವ್ಯಾಕ್ಸಿನ್ ಹಾಕಿಸಿರೋ ಸೆರಟಿಫಿಕೇಟ್ ತೋರಿಸಿದ್ರೆ ಮಾತ್ರ ಸಿಗುತ್ತೆ. ಆ ರೀತಿ ಆದೇಶ ಹೊರಡಿಸಿದ್ದೇನೆ’ ಅಂತ ಜಿಲ್ಲಾಧಿಕಾರಿ ಜೆ ಇನ್ನೋಸೆಂಟ್ ದಿವ್ಯಾ ಹೇಳಿಕೆ ನಿಡಿದ್ದಾರೆ. ಈ ಸುದ್ದಿ ಮಾತ್ರ ವಿಶೇಷ ಅಲ್ಲ. ಡಿಸಿ ಹೆಸರು ಕೂಡ ವಿಶೇಷ. ಇನ್ನೋಸೆಂಟ್ ದಿವ್ಯ ಅಂತೆ. ಎಂಥಾ ಕ್ರಿಯೇಟಿವಿಟಿ.

-masthmagaa.com

Contact Us for Advertisement

Leave a Reply