masthmagaa.com:
ರಾಜ್ಯ ಸಚಿವ ಸಂಪುಟ ನಾಳೆ ರಚನೆಯಾಗೋ ಸಾಧ್ಯತೆ ದಟ್ಟವಾಗಿದೆ. ಒಂದೇ ಸಲ ಸಂಪುಟ ರಚನೆ ಮಾಡೋ ಗುರಿ ಹೊಂದಲಾಗಿದ್ದು, 25ರಿಂದ 30 ಮಂದಿ ಪ್ರಮಾಣ ವಚನ ಸ್ವೀಕರಿಸೋ ಸಾಧ್ಯತೆ ಇದೆ. ಇನ್ನು ಇವತ್ತು ದೆಹಲಿಯಲ್ಲಿ ಮಾತನಾಡಿದ ಸಿಎಂ ಬಸವರಾಜ್ ಬೊಮ್ಮಾಯಿ, ಬೇರೆ ಬೇರೆ ಕಾಂಬಿನೇಷನ್ನ ಎರಡ್ಮೂರು ಪಟ್ಟಿಗಳನ್ನು ಹೈಕಮಾಂಡ್ಗೆ ನೀಡಿದ್ದೀವಿ. ಅದ್ರಲ್ಲಿ ಯಾವುದಾದ್ರೂ ಒಂದನ್ನು ಹೈಕಮಾಂಡ್ ಆಯ್ಕೆ ಮಾಡಲಿದ್ದು, ಅದಾದ ಬಳಿಕ ಸಂಪುಟ ರಚನೆ ಬಗ್ಗೆ ಕಂಪ್ಲೀಟ್ ಮಾಹಿತಿ ಕೊಡ್ತೀನಿ ಅಂತ ಹೇಳಿದ್ರು. ಮತ್ತೊಂದ್ಕಡೆ ಬಸವರಾಜ್ ಬೊಮ್ಮಾಯಿ ಸಿಎಂ ಆಗ್ತಿದ್ದಂತೆ ಯಡಿಯೂರಪ್ಪ ಅವಧಿಯಲ್ಲಿ ನೇಮಕವಾಗಿದ್ದ ಸಿಎಂ ರಾಜಕೀಯ ಕಾರ್ಯದರ್ಶಿ ಸೇರಿದಂತೆ 10 ಹುದ್ದೆಗಳನ್ನು ರದ್ದುಪಡಿಸಲಾಗಿದೆ.
-masthmagaa.com
Contact Us for Advertisement