masthmagaa.com:
ಪೊಲೀಸರ ಇನ್ಫಾರ್ಮರ್ಗಳು ಅನ್ನೋ ಶಂಕೆ ಮೇರೆಗೆ ಮಾವೋವಾದಿಗಳು ಇಬ್ಬರನ್ನು ಅಪಹರಿಸಿ, ಗುಂಡಿಟ್ಟು ಹತ್ಯೆ ಮಾಡಿದ್ದಾರೆ. ಮಧ್ಯಪ್ರದೇಶದ ಬಾಲಘಾಟ್ನಲ್ಲಿ ಈ ಘಟನೆ ವರದಿಯಾಗಿದೆ. ಶುಕ್ರವಾರ ರಾತ್ರಿ ಮನೆಗೆ ನುಗ್ಗಿದ ಮಾವೋವಾದಿಗಳು ಬಲವಂತವಾಗಿ ಸಂತೋಶ್ ಯಾದವ್ ಮತ್ತು ಜಗದೀಶ್ ಪಟೇಲ್ ಅನ್ನೋರನ್ನ ಎಳ್ಕೊಂಡು ಹೋಗಿದ್ರು. ಆಮೇಲೆ ಅರಣ್ಯದಲ್ಲಿ ಗುಂಡಿನ ಶಬ್ದ ಕೇಳಿತ್ತು. ಮರುದಿನ ಇಬ್ಬರು ಶವವಾಗಿ ಪತ್ತೆಯಾಗಿದ್ದಾರೆ.
ಮಹಾರಾಷ್ಟ್ರದ ಗಡ್ಚಿರೋಲಿಯಲ್ಲಿ ನಿನ್ನೆ ನಡೆದ ಎನ್ಕೌಂಟರ್ನಲ್ಲಿ 26 ಮಂದಿ ನಕ್ಸಲರು ಪ್ರಾಣ ಕಳ್ಕೊಂಡಿದ್ದಾರೆ. ಇವರಲ್ಲಿ ಭೀಮಾ ಕೋರೆಗಾಂವ್ ಪ್ರಕರಣದಲ್ಲೂ ಆರೋಪಿಯಾಗಿರೋ ಮಿಲಿಂದ್ ತೆಲ್ತುಂಬೆ ಕೂಡ ಸೇರಿದ್ದಾರೆ ಅಂತ ಗೊತ್ತಾಗಿದೆ. ಇವರ ತಲೆ ಮೇಲೆ ಪೊಲೀಸರು 50 ಲಕ್ಷ ರೂಪಾಯಿ ಬಹುಮಾನ ಘೋಷಿಸಿದ್ರು. ಇನ್ನು ಎನ್ಕೌಂಟರ್ ಜಾಗದಲ್ಲಿ ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶಕ್ಕೆ ಪಡೆಯಲಾಗಿದೆ. 2018ರಲ್ಲಿ ಇದೇ ರೀತಿಯ ಕಾರ್ಯಾಚರಣೆಯಲ್ಲಿ 40 ಮಂದಿ ನಕ್ಸಲರನ್ನು ಹತ್ಯೆ ಮಾಡಲಾಗಿತ್ತು. ಅದು ಬಿಟ್ರೆ ಇದೇ ಅತಿದೊಡ್ಡ ಎನ್ಕೌಂಟರ್ ಆಗಿದೆ.
-masthmagaa.com
Contact Us for Advertisement