masthmagaa.com:
ಭಾರತದ ಮೇಲೆ ಆರೋಪಗಳ ಸುರಿಮಳೆ ಸುರಿಸೋ ಕೆನಡಾ ಸರ್ಕಾರ ಇದೀಗ ಭಾರತದಲ್ಲಿ ಕೆಲಸ ಮಾಡೋ ತನ್ನ ಹತ್ತಾರು ರಾಜತಾಂತ್ರಿಕ ಅಧಿಕಾರಿಗಳನ್ನ ವಾಪಾಸ್ ಕರೆಸಿಕೊಂಡಿದೆ. ಭಾರತದ ಮಿಷನ್ಗಳಲ್ಲಿ ಕೆಲಸ ಮಾಡೋಕೆ ಸಿಬ್ಬಂದಿ ಕೊರತೆ ಇದೆ, ಹಾಗಾಗಿ ಕಾರ್ಯಾಚರಣೆಗಳನ್ನ ಎಫೆಕ್ಟಿವ್ ಆಗಿ ಮ್ಯಾನೇಜ್ ಮಾಡೋಕೆ ಆಗ್ತಿಲ್ವ. ಇದೇ ಕಾರಣಕ್ಕೆ ಇರೋ ಸಿಬ್ಬಂದಿಗಳನ್ನೂ ವಾಪಸ್ ಕರೆಸಿಕೊಳ್ಳಲಾಗ್ತಿದೆ ಅಂತ ಕೆನಡಾ ಹೇಳಿದೆ. ಅಂದ್ಹಾಗೆ ಖಲಿಸ್ತಾನಿ ಉಗ್ರ ನಿಜ್ಜರ್ ಹತ್ಯೆ ವಿಚಾರವಾಗಿ ಕೆನಡಾ ಮತ್ತು ಭಾರತ ನಡುವೆ ರಾಜತಾಂತ್ರಿಕ ಬಿಕ್ಕಟ್ಟು ಶುರುವಾಗಿತ್ತು. ಆಗ ಭಾರತ ಹೇಳಿತ್ತು ಅಂತ ಕಳೆದ ವರ್ಷ ಅಕ್ಟೋಬರ್ನಲ್ಲಿ, ಕೆನಡಾ ಭಾರತದಲ್ಲಿರೋ ತನ್ನ 41 ಅಧಿಕಾರಿಗಳನ್ನ ವಾಪಾಸ್ ಕರೆಸಿಕೊಂಡಿತ್ತು. ಅಂದಿನಿಂದ ದಿಲ್ಲಿಯಲ್ಲಿರೋ ಕೆನಡಾದ ಹೈ ಕಮಿಷನ್ ಮತ್ತು ಮುಂಬೈ, ಚಂಡೀಗಢ ಮತ್ತು ಬೆಂಗಳೂರಿನಲ್ಲಿರೋ ಕಾನ್ಸುಲೇಟ್ ಆಫೀಸ್ಗಳಲ್ಲಿ ಸುಮಾರು 21 ಕೆನಡಾ ರಾಜತಾಂತ್ರಿಕರು ಕೆಲಸ ಮಾಡ್ತಿದ್ರು ಅಷ್ಟೇ. ಈಗ ಅವ್ರಲ್ಲೂ ಕೆಲವರನ್ನ ವಾಪಸ್ ಕರೆಸಿಕೊಳ್ಳೋಕೆ ಮುಂದಾಗಿದೆ.
-masthmagaa.com
Contact Us for Advertisement