ದೆಹಲಿ ಗಲಭೆ ಕೇಸ್‌, ಉಮರ್‌ಗೆ ಬೇಲ್‌ ನಿರಾಕರಿಸಿದ ಕೋರ್ಟ್‌ !

masthmagaa.com:

ಮಾಜಿ JNU ವಿದ್ಯಾರ್ಥಿ ಹಾಗು ದೆಹಲಿ ಹಿಂಸಾಚಾರ ಪ್ರಕರಣದಲ್ಲಿ ಆರೋಪಿಯಾಗಿರೋ ಉಮರ್‌ ಖಲೀದ್‌ನ ಜಾಮೀನು ಅರ್ಜಿಯನ್ನ ದೆಹಲಿ ನ್ಯಾಯಾಲಯ ವಜಾಗೊಳಿಸಿದೆ. ದೆಹಲಿಯ ಹೆಚ್ಚುವರಿ ನ್ಯಾಯಾಲಯದ ಪೀಠ ನಿರ್ಧಾರ ಕೈಗೊಂಡಿದ್ದು, ಆರೋಪಿಯ ಮೇಲೆ ಸಾಕಷ್ಟು ಕೇಸ್‌ಗಳಿದ್ದು ಬೇಲ್‌ ನೀಡೋಕೆ ಸಾಧ್ಯವಿಲ್ಲಅಂತ ಅರ್ಜಿಯನ್ನ ತಿರಸ್ಕರಿಸಿದೆ. ಅಂದಹಾಗೆ 2020 ಫೆಬ್ರವರಿಯಲ್ಲಿ ದೆಹಲಿಯಲ್ಲಿ ನಡೆದ ಹಿಂಸಾಚಾರದಲ್ಲಿ ಸುಮಾರು 53 ಜನರು ಪ್ರಾಣ ಕಳ್ಕೊಂಡಿದ್ರು. 700 ಜನ ಗಾಯಗೊಂಡಿದ್ರು. ಈ ಸಂಬಂಧ ಉಮರ್‌ನನ್ನ ದೆಹಲಿ ಗಲಭೆಯ ಮಾಸ್ಟರ್‌ ಮೈಂಡ್‌ ಅಂತ ಹೇಳಲಾಗಿತ್ತು. ಅಲ್ದೇ ಈತ ಉಗ್ರವಿರೋಧಿ ಕಾರ್ಯಚರಣೆಗೆ ಅಡ್ಡಿಪಡಿಸಿದ್ದ ಅನ್ನೋ ಆರೋಪಕ್ಕೆ ಸಾಕ್ಷಿಗಳೂ ಕೂಡ ಸಿಕ್ಕಿದ್ವು.

-masthmagaa.com

Contact Us for Advertisement

Leave a Reply