ನಾಳೆಯಿಂದ ಸಾರಿಗೆ ಮುಷ್ಕರ ಮತ್ತಷ್ಟು ಚುರುಕು

masthmagaa.com:
ರಾಜ್ಯದಲ್ಲಿ ಸಾರಿಗೆ ನೌಕರರ ಮುಷ್ಕರ ಮುಂದುವರಿದಿದೆ. ನಾಳೆ ಬೆಂಗಳೂರಿನಲ್ಲಿ ಉಪವಾಸ ಸತ್ಯಾಗ್ರಹ ನಡೆಸೋದಾಗಿ ಸಾರಿಗೆ ನೌಕರರ ಸಂಘದ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದ್ದಾರೆ. ಜೊತೆಗೆ ಸೋಮವಾರ ಬಳಿಕ ಮುಷ್ಕರವನ್ನ ತೀವ್ರಗೊಳಿಸ್ತೀವಿ. ಜೈಲ್ ಭರೋ ಚಳವಳಿಯನ್ನ ನಡೆಸುತ್ತೇವೆ ಅಂತ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದ್ದಾರೆ. ಇನ್ನು ಕೆಲಸಕ್ಕೆ ಹಾಜರಾಗದ 2,443 ಚಾಲಕ ಮತ್ತು ನಿರ್ವಾಹಕರನ್ನ ಬಿಎಂಟಿಸಿ ಅಮಾನತು ಮಾಡಿದೆ. ಅತ್ತ ವಿಟಿಯು ಮೊದಲ ಸೆಮಿಸ್ಟರ್​ನ ಪರೀಕ್ಷೆಗಳು ನಾಳೆ ನಡೆಯಬೇಕಿರೋದ್ರಿಂದ ಬಸ್​ಗಳ ವ್ಯವಸ್ಥೆ ಮಾಡುವಂತೆ ಕಾಲೇಜುಗಳಿಗೆ ವಿಟಿಯು ಸೂಚನೆ ನೀಡಿದೆ.

-masthmagaa.com

Contact Us for Advertisement

Leave a Reply