masthmagaa.com:
ಉತ್ತರ ಪ್ರದೇಶದಲ್ಲಿ ಇತ್ತೀಚೆಗೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಬಿಜೆಪಿಯ ಸ್ವಾಮಿ ಪ್ರಸಾದ್ ಮೌರ್ಯ ಮತ್ತು ಧರಂ ಸಿಂಗ್ ಸೈನಿ ಅಧಿಕೃತವಾಗಿ ಸಮಾಜವಾದಿ ಪಕ್ಷಕ್ಕೆ ಸೇರಿದ್ದಾರೆ. ಅಖಿಲೇಷ್ ಸಿಂಗ್ ಯಾದವ್ ನೇತೃತ್ವದಲ್ಲಿ ಸೈಕಲ್ ಬಾವುಟ ಹಿಡಿದು, ಚುನಾವಣೆಗೆ 30 ದಿನ ಇರೋವಾಗ ಬಿಜೆಪಿಗೆ ಶಾಕ್ ಕೊಟ್ಟಿದ್ದಾರೆ. ಇವರಲ್ಲೆ ಐವರು ಬಿಜೆಪಿ ಶಾಸಕರು ಮತ್ತು ಆಡಳಿತಾರೂಢ ಪಕ್ಷದ ಮಿತ್ರಪಕ್ಷವಾದ ಅಪ್ನಾದಳ್ ಪಕ್ಷದ ಶಾಸಕರೊಬ್ಬರು ಅಖಿಲೇಷ್ಗೆ ಜೈ ಎಂದಿದ್ದಾರೆ. ಅಂದಹಾಗೆ ಈವರೆಗೆ 3 ಸಚಿವರು ಸೇರಿದಂತೆ 11 ಮಂದಿ ಶಾಸಕರು ಬಿಜೆಪಿಗೆಯಿಂದ ಹೊರಹಾರಿದ್ದಾರೆ. ಚುನಾವಣೆ ಹೊಸ್ತಿಲಲ್ಲಿ ಇದು ಬಿಜೆಪಿಗೆ ದೊಡ್ಡ ಹೊಡೆತ ಅಂತಲೇ ಹೇಳಲಾಗ್ತಿದೆ.
ಇವತ್ತು ಒಂದ್ಕಡೆ ಮಧ್ಯಾಹ್ನ ಅಖಿಲೇಶ್ ಸಿಂಗ್ ಯಾದವ್ ಬಿಜೆಪಿ ನಾಯಕರನ್ನು ತಮ್ಮ ಪಕ್ಷಕ್ಕೆ ಸೇರಿಸಿಕೊಳ್ತಿದ್ರೆ, ಅತ್ತ ಸಿಎಂ ಯೋಗಿ ಆದಿತ್ಯನಾಥ್ ಗೋರಖ್ಪುರದಲ್ಲಿ ದಲಿತರ ಮನೆಯಲ್ಲಿ ಊಟ ಮಾಡಿದ್ದಾರೆ. ಇತ್ತೀಚೆಗೆ ಪಕ್ಷ ಬಿಟ್ಟುಹೋದ ಎಲ್ಲಾ ನಾಯಕರು ಯೋಗಿ ಆದಿತ್ಯನಾಥ್ ಸರ್ಕಾರ ಹಿಂದುಳಿದ ವರ್ಗದವರನ್ನು ಕಡೆಗಣಿಸಿದೆ ಅಂತ ಆರೋಪಿಸಿದ್ರು. ಆದ್ರೆ ಇವತ್ತು ದಲಿತರ ಮನೆಯಲ್ಲಿ ಊಟ ಮಾಡಿ, ಆ ಆರೋಪಕ್ಕೆ ಯೋಗಿ ತಿರುಗೇಟು ನೀಡಿದ್ದಾರೆ ಅಂತ ಹೇಳಲಾಗ್ತಿದೆ.
-masthmagaa.com
Contact Us for Advertisement