maasthmagaa.com:
ಉತ್ತರ ಪ್ರದೇಶದ ಶಹಜಹಾನ್ಪುರದಲ್ಲಿ ವೈದ್ಯರು ಸಿಸೇರಿಯನ್ ಆಪರೇಷನ್ ಮಾಡಿದ ಬಳಿಕ ಬಟ್ಟೆಯ ತುಂಡನ್ನು ಮಹಿಳೆಯ ಗರ್ಭಕೋಶದಲ್ಲೇ ಉಳಿಸಿದ್ದರ ಬಗ್ಗೆ ನಾವು ಹೇಳಿದ್ವಿ. ಆಗ ಮಹಿಳೆ ತುಂಬಾ ಗಂಭೀರಗೊಂಡು ಲಕ್ನೋದ ಕಿಂಗ್ ಜಾರ್ಜ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೀತಿದ್ದಾರೆ ಅಂತ ಕೂಡ ತಿಳಿಸಿದ್ವಿ. ಆದ್ರೀಗ ಆ ಮಹಿಳೆ ಪ್ರಾಣ ಬಿಟ್ಟಿದ್ಧಾರೆ. ಈ ಸಂಬಂಧ ತನಿಖೆಗಾಗಿ ಕಮಿಟಿ ರಚಿಸಿದ್ದೀವಿ ಅಂತ ವೈದ್ಯಕೀಯ ಕಾಲೇಜು ಪ್ರಿನ್ಸಿಪಲ್ ಹೇಳಿದ್ದಾರೆ. ಆದ್ರೆ ಈ ಕಮಿಟಿ ಸದಸ್ಯರು ಇನ್ನೂ ಕೂಡ ಮಹಿಳೆಯ ಪತಿಯ ಹೇಳಿಕೆಯನ್ನೂ ಪಡೆದಿಲ್ಲ. ಅಂದಹಾಗೆ ಇದೇ ವರ್ಷ ಜನವರಿ 6ರಂದು ಮಹಿಳೆಗೆ ಸಿಸೇರಿಯನ್ ಆಪರೇಷನ್ ಮಾಡಲಾಗಿತ್ತು.
-masthmagaa.com
Contact Us for Advertisement