masthmagaa.com:
ಟಿ-20 ವಿಶ್ವಕಪ್ನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಮ್ಯಾಚ್ ಹತ್ತಿರವಾಗ್ತಿದ್ದಂತೇ ಅದನ್ನ ಕ್ಯಾನ್ಸಲ್ ಮಾಡಬೇಕು ಅನ್ನೋ ಕೂಗು ಕೂಡ ಅಷ್ಟೇ ಜೋರಾಗಿದೆ. ಜಮ್ಮು ಕಾಶ್ಮೀರದಲ್ಲಿ ಟಾರ್ಗೆಟೆಡ್ ಹತ್ಯೆಗಳು ನಡೀತಿರೋ ಹಿನ್ನೆಲೆ ಅಂಥಾ ದಾಳಿಗಳು ನಿಲ್ಲೋವರೆಗೆ ಭಾರತ ಮತ್ತು ಪಾಕ್ ಮ್ಯಾಚ್ ನಡೀಬಾರ್ದು ಅಂತ ಈಗ ಆಮ್ ಆದ್ಮಿ ಪಕ್ಷ ಆಗ್ರಹಿಸಿದೆ. ಆಪ್ ಶಾಸಕಿ ಆತಿಶಿ ಮಾತನಾಡಿ, ಪ್ರಧಾನಿ ಮೋದಿ ವಿಪಕ್ಷದಲ್ಲಿದ್ದಾಗ ಇಂಥಾ ದಾಳಿಗಳನ್ನ ವಿರೋಧಿಸಿದ್ರು, ಪಾಕ್ ಜೊತೆ ಯಾಕೆ ಕ್ರಿಕೆಟ್ ಆಡ್ತೀರಾ ಅಂತ ಕೇಳಿದ್ರು. ಸೋ ಈಗ ಅವರು ಕೂಡ ಭಾರತ-ಪಾಕಿಸ್ತಾನ ಮ್ಯಾಚ್ ನಡೀದೇ ಇರಲಿ ಅನ್ನೋ ಮನಸ್ಥಿತಿಯಲ್ಲಿರಬಹುದು ಅಂತ ಹೇಳಿದ್ಧಾರೆ.
-masthmagaa.com
Contact Us for Advertisement