ಭಯ ಹುಟ್ಟಿಸೋಕೆ ಪಬ್ಲಿಕ್‌ನಲ್ಲಿ ಭಾರತ ವಿರುದ್ಧ ಆರೋಪ ಮಾಡಿದ್ದೇವೆ: ಜಸ್ಟಿನ್‌ ಟ್ರುಡು

masthmagaa.com:

ಉಗ್ರ ನಿಜ್ಜರ್‌ ಕೊಲೆಗೆ ಭಾರತವೇ ಕಾರಣ ಅಂತ ಬ್ಯಾಕ್‌ ಟು ಬ್ಯಾಕ್‌ ಆರೋಪಿಸ್ತಲೇ ಬಂದಿರೋ ಕೆನಡಾ ಇದೀಗ ಮತ್ತೇ ಕ್ಯಾತೆ ತೆಗೆದಿದೆ. ಭಾರತಕ್ಕೆ ಚಳಿ ಹುಟ್ಟಿಸೋಕಂತಲೇ ಗಂಟಾಘೋಷವಾಗಿ ಪಬ್ಲಿಕ್‌ನಲ್ಲಿ ಭಾರತ ವಿರುದ್ಧ ಆರೋಪಿಸಿದ್ದೇವೆ ಅಂತ ಜಸ್ಟಿನ್‌ ಟ್ರುಡು ಹೇಳಿದ್ದಾರೆ. ಇಂಟರ್‌ವ್ಯೂ ಒಂದ್ರಲ್ಲಿ ಮಾತನಾಡಿದ ಅವ್ರು, ʻಖಲಿಸ್ತಾನಿ ಉಗ್ರನ ಹತ್ಯೆ ಹಿಂದೆ ಭಾರತ ಕೈವಾಡವಿದೆ ಅಂತ ನಮಗೆ ಗೊತ್ತಿದೆ. ಇದನ್ನ ನಂಬೋಕು ನಮ್ಮ ಬಳಿ ಕಾರಣಗಳಿವೆ. ಆದ್ರಿಂದ ಈ ರೀತಿಯ ಕೃತ್ಯಗಳು ರಿಪೀಟ್‌ ಆಗದಿರಲಿ ಅಂತ ಸ್ವಲ್ಪ ಹೆದರಿಕೆ ಹುಟ್ಟಿಸೋಕೆ ಓಪನ್‌ ಆಗಿ ಪಬ್ಲಿಕ್‌ನಲ್ಲಿ ಭಾರತ ವಿರುದ್ಧ ಆರೋಪ ಮಾಡಿದ್ದೇವೆ. ಈ ವಿಚಾರವಾಗಿ ನಾವು ಅಮೆರಿಕ ಸ್ಟೈಲ್‌ನಲ್ಲೇ ಎವಿಡೆನ್ಸ್‌ನ ಮುಂದಿಡುತ್ತೇವೆ. ಸದ್ಯ ಈ ಹತ್ಯೆ ವಿಚಾರವಾಗಿ ಕೆನಡಾ ತನಿಖೆ ನಡೆಸ್ತಿದೆ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply