masthmagaa.com:
ದೇಶದಲ್ಲಿ ಕ್ರಿಪ್ಟೊಕರೆನ್ಸಿ ಕುರಿತ ವಂಚನೆಗೆ ಸಂಬಂಧಿಸಿದ 8 ಪ್ರಕರಣಗಳ ಬಗ್ಗೆ ಜಾರಿ ನಿರ್ದೇಶನಾಲಯ ವಿಚಾರಣೆ ನಡೆಸ್ತಿದೆ ಅಂತ ಕೇಂದ್ರ ಸರ್ಕಾರ ರಾಜ್ಯಸಭೆಗೆ ಲಿಖಿತ ಉತ್ತರ ಕೊಟ್ಟಿದೆ. ಬಹುಶಃ ಇದರಲ್ಲಿ ಶ್ರೀಕಿ ಕೇಸ್ ಕೂಡ ಸೇರಿರಬಹುದೇನೋ. ಇನ್ನು ರಾಜ್ಯಸಭೆಯಲ್ಲಿ ಮಾತನಾಡಿರೋ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಕ್ರಿಪ್ಟೋಕರೆನ್ಸಿ ಅನ್ನೋದು ತುಂಬಾ ರಿಸ್ಕಿ ಏರಿಯಾ ಮತ್ತು ಸಂಪೂರ್ಣ ನಿಯಂತ್ರಣ ಮಾಡುವ ಚೌಕಟ್ಟಿನಲ್ಲಿಲ್ಲ. ಕ್ರಿಪ್ಟೊಕರೆನ್ಸಿ ಕುರಿತ ಜಾಹಿರಾತುಗಳನ್ನ ನಿಷೇಧಿಸುವ ಯಾವುದೇ ನಿರ್ಧಾರವನ್ನ ತೆಗೆದುಕೊಂಡಿಲ್ಲ. ಇದರ ಬಗ್ಗೆ ಜಾಗೃತಿ ಮೂಡಿಸಲು ಆರ್ಬಿಐ ಮತ್ತು ಸೆಬಿ ಮೂಲಕ ಕ್ರಮ ಕೈಗೊಳ್ತಿದ್ದೀವಿ. ಸರ್ಕಾರ ಶೀಘ್ರದಲ್ಲೇ ಕ್ರಿಪ್ಟೋಕರೆನ್ಸಿ ಕುರಿತ ಒಂದು ಮಸೂದೆಯನ್ನ ಮಂಡಿಸಲಿದೆ ಎಂದಿದ್ದಾರೆ.
-masthmagaa.com
Contact Us for Advertisement