masthmagaa.com:
ಕೆಟ್ಟವರು ಅಧಿಕಾರದಲ್ಲಿರೋದಕ್ಕಿಂತ ವಂಶಪಾರಂಪರ್ಯವೇ ಒಳ್ಳೇದು ಅಂತ ಮಮತಾ ಬ್ಯಾನರ್ಜಿ ಅಳಿಯ ಅಭಿಷೇಕ್ ಬ್ಯಾನರ್ಜಿ ಹೇಳಿದ್ದಾರೆ. ಮೊದಲಿಂದಲೂ ದೀದಿ ಸ್ವಜನ ಪಕ್ಷಪಾತ ಮಾಡ್ತಿದ್ದಾರೆ. ಟಿಎಂಸಿಯಲ್ಲಿ ವಂಶಪಾರಂಪರ್ಯ ಇದೆ ಅನ್ನೋ ಆರೋಪ ಇತ್ತು..ಅದ್ರ ನಡುವೆಯೇ ಮೊನ್ನೆಯಷ್ಟೇ ಅಭಿಷೇಕ್ ಬ್ಯಾನರ್ಜಿಯನ್ನು ಟಿಎಂಸಿ ಪಕ್ಷದ ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಿಸಲಾಗಿತ್ತು. ಹೀಗಾಗಿ ಸೋಷಿಯಲ್ ಮೀಡಿಯಾದಲ್ಲಿ ಬಿಜೆಪಿ ಡೈನಾಸ್ಟಿ ಅಂದ್ರೆ ವಂಶಪಾರಂಪರ್ಯ ಟ್ಯಾಗ್ ಮೂಲ ಟೀಕಿಸ್ತಾ ಇದೆ. ಅದಕ್ಕೆ ಕೆಲವೊಂದು ಸಮಯದಲ್ಲಿ ಕೆಟ್ಟವರಿಗಿಂತ ವಂಶಪಾರಂಪರ್ಯವೇ ಒಳ್ಳೆದು ಅನ್ನೋ ಮೂಲಕ ಪರೋಕ್ಷವಾಗಿ ತಮ್ಮದು ವಂಶಪಾರಂಪರ್ಯ ಅಂತ ಒಪ್ಪಿಕೊಂಡಿದ್ದಾರೆ.
-masthmagaa.com
Contact Us for Advertisement