ಚಿತೆ ಆರಿಸಿ, ಮಹಿಳೆಯ ಮೃತದೇಹ ತೆಗೆದ ಪೊಲೀಸರು..! ಯಾಕೆ ಗೊತ್ತಾ..?

ಉತ್ತರ ಪ್ರದೇಶದ ಬುಲಂದ್​ ಶಹರ್​​ನಲ್ಲಿ ಅಚ್ಚರಿಯ ಘಟನೆಯೊಂದು ನಡೆದಿದೆ. ವಿವಾಹಿತೆಯೊಬ್ಬರ ಅನುಮಾನಾಸ್ಪದ ಸಾವಿನ ಸುದ್ದಿ ಕೇಳಿ ಮಗಳ ಮನೆಗೆ ಬಂದ ತಂದೆ ಮತ್ತು ಅಣ್ಣನನ್ನು ವಿವಾಹಿತೆಯ ಗಂಡನ ಮನೆಯವರು ಕೂಡಿ ಹಾಕಿದ್ದಾರೆ. ಅಲ್ಲದೆ ವಿವಾಹಿತೆಯ ತಂದೆ ಮತ್ತು ಅಣ್ಣನ ವಿರೋಧದ ನಡುವೆಯೂ ಆಕೆಯನ್ನು ಸ್ಮಶಾನಕ್ಕೆ ಕರೆದೊಯ್ದು ಬೆಂಕಿ ಹಚ್ಚಿದ್ದಾರೆ. ಈ ವೇಳೆ ಹೇಗೋ ತಪ್ಪಿಸಿಕೊಂಡ ತಂದೆ ಮತ್ತು ಅಣ್ಣ ಗ್ರಾಮಸ್ಥರ ಜೊತೆ ಸ್ಮಶಾನಕ್ಕೆ ಬಂದಿದ್ದಾರೆ. ಈ ವೇಳೆ ವಿವಾಹಿತೆಯ ತಂದೆ, ಅಣ್ಣ ಮತ್ತು ಗಂಡನ ಕುಟುಂಬದವರ ನಡುವೆ ಹೊಡೆದಾಟವಾಗಿದೆ. ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಬೆಂಕಿ ಆರಿಸಿ, ವಿವಾಹಿತೆಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಮೃತಳ ಹೆಸರು ಪೂನಂ ಎಂದು ತಿಳಿದುಬಂದಿದೆ. ಈಕೆಯ ತಂದೆ ನೀಡಿದ ದೂರಿನ ಮೇರೆಗೆ ಪತಿ ಮತ್ತವನ ಕುಟುಂಬದವರನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸುತ್ತಿದ್ಧಾರೆ.

Contact Us for Advertisement

Leave a Reply