masthmagaa.com:
ಕರ್ನಾಟಕದಲ್ಲಿ ಇವತ್ತು 397 ಮಂದಿಗೆ ಹೊಸದಾಗಿ ಸೋಂಕು ತಾಗಿದೆ ಅಂತ ರಾಜ್ಯ ಆರೋಗ್ಯ ಇಲಾಖೆ ತಿಳಿಸಿದೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 10 ಸಾವಿರ ಗಡಿ ದಾಟಿದ್ದು 10,118 ಆಗಿದೆ.
ಇವತ್ತು ಕರ್ನಾಟಕದಲ್ಲಿಈ ಸೋಂಕಿಗೆ ಸಂಬಂಧಪಟ್ಟಂತೆ 14 ರೋಗಿಗಳು ಸಾವನ್ನಪ್ಪಿದ್ದಾರೆ. ಈ ಪೈಕಿ ಬೆಂಗಳೂರಿನಲ್ಲಿ 5 ಜನ, ಬಳ್ಳಾರಿಯಲ್ಲಿ 4, ಕಲಬುರಗಿಯಲ್ಲಿ 2, ರಾಮನಗರದಲ್ಲಿ 2 ಮತ್ತು ತುಮಕೂರಿನಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಇದುವರೆಗೆ ಕೊರೋನಾ ಸೋಂಕಿಗೆ 164 ಜನ ಮೃತಪಟ್ಟಂತಾಗಿದೆ.
ಇನ್ನು ರಾಜ್ಯದಲ್ಲಿ ಇದುವರೆಗೆ 6,151 ಮಂದಿ ಗುಣಮುಖರಾಗಿದ್ದಾರೆ. 3,799 ಜನ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೀತಿದಾರೆ. ಇದರಲ್ಲಿ 112 ಜನ ಗಂಭೀರ ಸ್ಥಿತಿಯಲ್ಲಿದ್ದು, ತೀವ್ರ ನಿಗಾ ಘಟಕದಲ್ಲಿದಾರೆ.
ಇವತ್ತಿನ ಕೊರೋನಾ ಪ್ರಕರಣಗಳು:
ಬೆಂಗಳೂರು ನಗರ – 173
ಬಳ್ಳಾರಿ – 34
ಕಲಬುರಗಿ – 22
ರಾಮನಗರ – 22
ಉಡುಪಿ – 14
ಯಾದಗಿರಿ – 13
ದಕ್ಷಿಣ ಕನ್ನಡ – 12
ಧಾರವಾಡ – 12
ಕೊಪ್ಪಳ – 11
ರಾಯಚೂರು – 9
ಉತ್ತರಕನ್ನಡ – 9
ದಾವಣಗೆರೆ – 8
ಚಿಕ್ಕಬಳ್ಳಾಪುರ – 8
ಮೈಸೂರು – 7
ಬೆಂಗಳೂರು ಗ್ರಾಮಾಂತರ – 7
ಗದಗ – 6
ಕೋಲಾರ – 6
ಬೀದರ್ – 5
ವಿಜಯಪುರ – 4
ಶಿವಮೊಗ್ಗ – 3
ಮಂಡ್ಯ – 2
ಚಿತ್ರದುರ್ಗ – 2
ಚಾಮರಾಜನಗರ – 2
ಕೊಡಗು – 2
ಬೆಳಗಾವಿ – 1
ಹಾಸನ – 1
ತುಮಕೂರು – 1
ಚಿಕ್ಕಮಗಳೂರು – 1
-masthmagaa.com
Contact Us for Advertisement