ಕೊರೋನಾಗೆ ಒಂದೇ ದಿನ 3 ಬಲಿ.. ಮಂಡ್ಯ, ದಾವಣಗೆರೆ, ಶಿವಮೊಗ್ಗ ತತ್ತರ..!

masthmagaa.com:

ರಾಜ್ಯದಲ್ಲಿ ನಿನ್ನೆ ಸಂಜೆ 5 ಗಂಟೆಯಿಂದ ಇಂದು ಮಧ್ಯಾಹ್ನ 12 ಗಂಟೆವರೆಗೆ ಬರೋಬ್ಬರಿ 127 ಜನರಿಗೆ ಹೊಸದಾಗಿ ಸೋಂಕು ತಗುಲಿದೆ ಅಂತ ರಾಜ್ಯ ಆರೋಗ್ಯ ಇಲಾಖೆ ತಿಳಿಸಿದೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1,373ಕ್ಕೆ ಏರಿಕೆಯಾಗಿದೆ.

ಆಘಾತಕಾರಿ ಅಂದ್ರೆ ಒಂದೇ ದಿನ ಮೂವರು ಕೊರೋನಾ ಸೋಂಕಿತರು ಮೃತಪಟ್ಟಿದ್ದಾರೆ. ಬಳ್ಳಾರಿಯಲ್ಲಿ 61 ವರ್ಷದ ವೃದ್ಧ (ರೋಗಿ ನಂಬರ್ 1185), ವಿಜಯಪುರದಲ್ಲಿ 65 ವರ್ಷದ ವೃದ್ಧ (ರೋಗಿ ನಂಬರ್ 1291) ಹಾಗೂ ಬೆಂಗಳೂರಿನಲ್ಲಿ 54 ವರ್ಷದ ಪುರುಷ (ರೋಗಿ ನಂಬರ್ 1364) ಮೃತಪಟ್ಟಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಮೃತಪಟ್ಟವರ ಸಂಖ್ಯೆ 40ಕ್ಕೆ ಏರಿಕೆಯಾಗಿದೆ.

ಇನ್ನು ಇಷ್ಟುದಿನ ಗ್ರೀನ್​ ಜೋನ್​ನಲ್ಲಿದ್ದ ಚಿಕ್ಕಮಗಳೂರು ಜಿಲ್ಲೆ ಈಗ ಆರೆಂಜ್ ಜೋನ್​ಗೆ ಹೋಗಿದೆ. ಆರೆಂಜ್​ ಜೋನ್​ನಲ್ಲಿದ್ದ ಶಿವಮೊಗ್ಗ ಜಿಲ್ಲೆ ಈಗ ರೆಡ್​ ಜೋನ್​ಗೆ ಹೋಗಿದೆ. ಜಿಲ್ಲಾವರು ಸೋಂಕಿತರ ಪಟ್ಟಿ ಮಂಡ್ಯ 2ನೇ ಸ್ಥಾನಕ್ಕೆ ಬಂದಿದೆ.

ಹೊಸದಾಗಿ ಪತ್ತೆಯಾದ 127 ಪ್ರಕರಣಗಳಲ್ಲಿ ಮಂಡ್ಯ ಜಿಲ್ಲೆಯೊಂದರಲ್ಲೇ ಬರೋಬ್ಬರಿ 62 ಜನರಿಗೆ ಸೋಂಕು ತಗುಲಿದೆ. ಎಲ್ಲರೂ ಮುಂಬೈನಿಂದ ಬಂದವರಾಗಿದ್ದಾರೆ.

ದಾವಣಗೆರೆ ಜಿಲ್ಲೆಯಲ್ಲಿ 19 ಪ್ರಕರಣಗಳು ದೃಢಪಟ್ಟಿವೆ.

ಶಿವಮೊಗ್ಗ ಜಿಲ್ಲೆಯಲ್ಲಿ 12 ಜನರಿಗೆ ಹೊಸದಾಗಿ ಸೋಂಕು ತಗುಲಿದೆ.  ಇದರಲ್ಲಿ 7 ಮಂದಿ ಮುಂಬೈ ಪ್ರಯಾಣದ ಹಿನ್ನೆಲೆ ಹೊಂದಿದ್ದಾರೆ. ಇಬ್ಬರು 2 ಕೇರಳ, ಒಬ್ಬರು ಆಂಧ್ರಪ್ರದೇಶ ನಂಟು ಹೊಂದಿದ್ದಾರೆ. ಮತ್ತಿಬ್ಬರು ದಾವಣಗೆರೆ ಪ್ರಯಾಣ ಹಿನ್ನೆಲೆ ಹೊಂದಿದ್ದಾರೆ.

ಕಲಬುರಗಿಯಲ್ಲಿ 11 ಜನರಿಗೆ ಕಾಯಿಲೆ ಹರಡಿದ್ದು, ಎಲ್ಲರೂ ಮುಂಬೈನಿಂದ ಬಂದವರಾಗಿದ್ದಾರೆ.

ಬೆಂಗಳೂರು ನಗರದಲ್ಲಿ 6 ಪ್ರಕರಣಗಳು ದೃಢಪಟ್ಟಿದೆ.

ಉಡುಪಿಯಲ್ಲಿ 4 ಜನರಿಗೆ ಸೋಂಕು ತಗುಲಿದ್ದು, ಎಲ್ಲರೂ ಮುಂಬೈನಿಂದ ಬಂದವರಾಗಿದ್ದಾರೆ.

ಉತ್ತರ ಕನ್ನಡದಲ್ಲಿ 4 ಪ್ರಕರಣ ದೃಢಪಟ್ಟಿದೆ. ಇದರಲ್ಲಿ ಇಬ್ಬರು ಮಹಾರಾಷ್ಟ್ರ, ಒಬ್ಬರು ಗುಜರಾತ್ ಹಾಗೂ ಮತ್ತೊಬ್ಬರು ತಮಿಳುನಾಡು ನಂಟು ಹೊಂದಿದ್ದಾರೆ.

ಹಾಸನ ಜಿಲ್ಲೆಯಲ್ಲಿ ಮತ್ತೆ 3 ಪ್ರಕರಣ ಪತ್ತೆಯಾಗಿದೆ. ಮೂರೂ ಜನ ಕೂಡ ಮುಂಬೈನಿಂದ ಬಂದವರಾಗಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ 2 ಪ್ರಕರಣ ದೃಢಪಟ್ಟಿದೆ. ಒಬ್ಬರು ಮುಂಬೈಗೆ ಹೋಗಿ ಬಂದಿದ್ದು, ಮತ್ತೊಬ್ಬರ ಸಂಪರ್ಕ ಪತ್ತೆಹಚ್ಚಲಾಗ್ತಿದೆ.

ಉಳಿದಂತೆ ಗದಗ, ವಿಜಯಪುರ, ಯಾದಗಿರಿ ಹಾಗೂ ಚಿತ್ರದುರ್ಗದಲ್ಲಿ ತಲಾ ಒಂದೊಂದು ಪ್ರಕರಣ ದೃಢಪಟ್ಟಿದೆ. ಇದರಲ್ಲಿ ಯಾದಗಿರಿ, ಗದಗ ಪ್ರಕರಣಗಳು ಮುಂಬೈ ನಂಟು ಹೊಂದಿವೆ.

ಇವತ್ತು ಪತ್ತೆಯಾದ 127 ಪ್ರಕರಣಗಳಲ್ಲಿ 91 ಜನ ಮಹಾರಾಷ್ಟ್ರದಿಂದ ಬಂದವರಾಗಿದ್ದಾರೆ. ರಾಜ್ಯದಲ್ಲಿ ಇದುವರೆಗೆ 530 ಗುಣಮುಖರಾಗಿ ವಿವಿಧ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ. 802 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.

-masthmagaa.com

Contact Us for Advertisement

Leave a Reply