masthmagaa.com:
ನಿನ್ನೆ 63 ಪ್ರಕರಣಗಳು ದೃಢಪಟ್ಟಿದ್ದ ರಾಜ್ಯದಲ್ಲಿ ಹೊಸದಾಗಿ 26 ಕೊರೋನಾ ಪ್ರಕರಣಗಳು ದೃಢಪಟ್ಟಿವೆ ಅಂತ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 951ಕ್ಕೆ ಏರಿಕೆಯಾಗಿದೆ.
ಕಲಬುರಗಿಯ ಕಂಟೈನ್ಮೆಂಟ್ ಜೋನ್ನಲ್ಲಿದ್ದ 60 ವರ್ಷದ ವೃದ್ಧರೊಬ್ಬರು ಮೇ 11ರಂದು ಮೃತಪಟ್ಟಿದ್ದಾರೆ. ಅವರಿಗೆ ಕೊರೋನಾ ಸೋಂಕು ತಗುಲಿರೋದು ಈಗ ದೃಢಪಟ್ಟಿದೆ. ಈ ಮೂಲಕ ರಾಜ್ಯದಲ್ಲಿ ಕೊರೋನಾಗೆ ಬಲಿಯಾದವರ ಸಂಖ್ಯೆ 32ಕ್ಕೆ ಏರಿಕೆಯಾಗಿದೆ. ಇದುವರೆಗೆ 442 ಜನ ಗುಣಮುಖರಾಗಿದ್ದಾರೆ.
ಜಿಲ್ಲಾವಾರು ಹೊಸ ಪ್ರಕರಣಗಳು:
ಇವತ್ತು ಬೀದರ್ ಜಿಲ್ಲೆಯೊಂದರಲ್ಲೇ 11 ಪ್ರಕರಣಗಳು ದೃಢಪಟ್ಟಿದ್ದು, ಎಲ್ಲರೂ ಕಂಟೈನ್ಮೆಂಟ್ ಜೋನ್ ಸಂಪರ್ಕಕ್ಕೆ ಬಂದವರಾಗಿದ್ದಾರೆ.
ಹಾಸನದಲ್ಲಿ ಮತ್ತೆ 4 ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಎಲ್ಲರೂ ಮುಂಬೈಗೆ ಹೋಗಿ ಬಂದವರಾಗಿದ್ದಾರೆ.
ಕಲಬುರಗಿ, ದಾವಣಗೆರೆ, ವಿಜಯಪುರ, ಉತ್ತರ ಕನ್ನಡದಲ್ಲಿ ತಲಾ ಎರಡು ಪ್ರಕರಣಗಳು ದೃಢಪಟ್ಟಿವೆ.
ಉಳಿದಂತೆ ಬೆಂಗಳೂರು ನಗರ, ಬಳ್ಳಾರಿ, ದಕ್ಷಿಣ ಕನ್ನಡದಲ್ಲಿ ತಲಾ ಒಬ್ಬರಿಗೆ ಕೊರೋನಾ ಸೋಂಕು ದೃಢಪಟ್ಟಿದೆ.
-masthmagaa.com
Contact Us for Advertisement