ಮಧ್ಯಪ್ರದೇಶ: ಹೊಶಂಗಾಬಾದ್ನಲ್ಲಿ ಮರಕ್ಕೆ ಕಾರು ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ರಾಷ್ಟ್ರಮಟ್ಟದ ಹಾಕಿ ಆಟಗಾರರು ಸಾವನ್ನಪ್ಪಿದ್ದಾರೆ. ಮೃತರೆಲ್ಲರೂ ಧ್ಯಾನ್ ಚಂದ್ ಟ್ರೋಫಿಗಾಗಿ ಆಟವಾಡಲು ತೆರಳುತ್ತಿದ್ದರು ಎಂದು ತಿಳಿದುಬಂದಿದೆ. ಇಂದು ಬೆಳಗ್ಗೆ 7 ಗಂಟೆ ಸುಮಾರಿಗೆ ರಾಯ್ ಸಲ್ಪುರ್ ಬಳಿ ಈ ಘಟನೆ ನಡೆದಿದೆ. ಎದುರಿನಿಂದ ಬರುತ್ತಿದ್ದ ವಾಹನಕ್ಕೆ ಡಿಕ್ಕಿ ತಪ್ಪಿಸಲು ಹೋಗಿ ಈ ದುರ್ಘಟನೆ ಸಂಭವಿಸಿದೆ.
ತಮ್ಮ ಸ್ನೇಹಿತರಲ್ಲಿ ಓರ್ವನ ಹುಟ್ಟುಹಬ್ಬವನ್ನು ಆಚರಿಸಿದ ಇಂದು ಮಧ್ಯಪ್ರದೇಶದ ಭೋಪಾಲ್ನಲ್ಲಿ ನಡೆಯಲಿದ್ದ, ಧ್ಯಾನ್ ಚಂದ್ ಹಾಕಿ ಪಂದ್ಯಕ್ಕೆ ತೆರಳುತ್ತಿದ್ದರು ಅಂತ ತಿಳಿದುಬಂದಿದೆ. ಮೃತರೆಲ್ಲರೂ 18ರಿಂದ 22 ವರ್ಷದೊಳಗಿನವರಾಗಿದ್ಧಾರೆ. ಮೃತರನ್ನು ಶಹನವಾಜ್, ಹುಸೇನ್, ಆದರ್ಶ್ ಹರ್ದುವಾ, ಆಶಿಶ್ ಲಾಲ್ ಮತ್ತು ಅಂಕಿತ್ ವರುಣ್ ಎಂದು ತಿಳಿದುಬಂದಿದೆ.
ಉಳಿದ ಮೂವರಿಗೆ ಗಂಭೀರ ಗಾಯಗಳಾಗಿದ್ದು ನರ್ಮದ ಅಪ್ನಾ ಆಸ್ಪತ್ರೆಯಲ್ಲಿ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ.
Contact Us for Advertisement