masthmagaa.com:
ದೆಹಲಿ: ಅರುಣಾಚಲ ಪ್ರದೇಶದಿಂದ ನಾಪತ್ತೆಯಾಗಿದ್ದ ಐವರನ್ನು ಚೀನಾ ಭಾರತಕ್ಕೆ ಹಸ್ತಾಂತರಿಸಿದೆ ಅಂತ ಸೇನಾ ಮೂಲಗಳು ಮಾಹಿತಿ ನೀಡಿವೆ. ಈ ತಿಂಗಳ ಆರಂಭದಲ್ಲಿ ಅಂದ್ರೆ ಸೆಪ್ಟೆಂಬರ್ 1ರಂದು ಅರುಣಾಚಲ ಪ್ರದೇಶದ ಗಡಿಭಾಗದಲ್ಲಿ ಬೇಟೆಗೆ ತೆರಳಿದ್ದ ಐವರು ಭಾರತೀಯರು ನಾಪತ್ತೆಯಾಗಿದ್ರು. ಇವರನ್ನು ಚೀನಾ ಸೇನೆಯೇ ಅಪಹರಿಸಿದೆ ಅಂತ ಕಾಂಗ್ರೆಸ್ ನಾಯಕರು ಆರೋಪಿಸಿದ್ದರು. ಆದ್ರೆ ಸೆಪ್ಟೆಂಬರ್ 8ರಂದು ಪ್ರತಿಕ್ರಿಯಿಸಿದ್ದ ಚೀನಾ ಸೇನೆ, ಐವರು ಭಾರತೀಯರು ನಮ್ಮ ಗಡಿಯೊಳಗೆ ಪತ್ತೆಯಾಗಿದ್ದಾರೆ. ಅವರನ್ನು ಭಾರತಕ್ಕೆ ಹಸ್ತಾಂತರಿಸುತ್ತೇವೆ ಅಂತ ಮಾಹಿತಿ ನೀಡಿತ್ತು. ಚೀನಾದ ಗಡಿಯೊಳಗೇ ಹಸ್ತಾಂತರಿಸುವ ಪ್ರಕ್ರಿಯೆ ನಡೆದಿದ್ದು, ಅಲ್ಲಿಂದ ಭಾರತಕ್ಕೆ ಬರಲು ಒಂದು ಗಂಟೆ ಸಮಯ ಬೇಕಾಗಲಿದೆ.
-masthmagaa.com
Contact Us for Advertisement