masthmagaa.com:
ಬಿಹಾರದಲ್ಲಿ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಿರುವ ಜೆಡಿಯು ಮತ್ತು ಬಿಜೆಪಿ ನಡುವೆ ಮನಸ್ತಾಪ ಉಂಟಾಗಿದೆ ಅಂತ ಚರ್ಚೆ ನಡೀತಿದೆ. ಅರುಣಾಚಲ ಪ್ರದೇಶದಲ್ಲಿ 6 ಮಂದಿ ಜೆಡಿಯು ಶಾಸಕರು ಬಿಜೆಪಿಗೆ ಪಕ್ಷಾಂತರ ಆಗಿದ್ದು, ಅದಾದ ಬಳಿಕ ಜೆಡಿಯು ಅಧ್ಯಕ್ಷ ಸ್ಥಾನಕ್ಕೆ ನಿತೀಶ್ ಕುಮಾರ್ ಬೇರೆಯವರನ್ನ ನೇಮಿಸಿದ್ದು, ನಂಗೆ ಸಿಎಂ ಆಗೋ ಆಸೆಯೇ ಇರಲಿಲ್ಲ ಅಂತ ಹೇಳಿದ್ದು ಇದಕ್ಕೆ ಪುಷ್ಟಿ ನೀಡಿದಂತಿದೆ. ಇದರ ನಡುವೆ ಜೆಡಿಯು ಪಕ್ಷದ 17 ಮಂದಿ ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ ಅಂತ ಆರ್ಜೆಡಿ ಹೇಳಿದೆ. 17 ಶಾಸಕರು ನಮ್ಮ ಪಕ್ಷವನ್ನ ಸೇರಲು ರೆಡಿ ಇದ್ದಾರೆ. ಆದ್ರೆ ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯ ಆಗೋದ್ರಿಂದ ನಾವೇ ಬೇಡ ಅಂದಿದ್ದೀವಿ. 28 ಶಾಸಕರು ಬಂದ್ರೆ ಮಾತ್ರ ನಾವು ಅವರನ್ನ ಪಕ್ಷಕ್ಕೆ ವೆಲ್ಕಂ ಮಾಡ್ತೀವಿ ಅಂತ RJD ನಾಯಕರೊಬ್ಬರು ಹೇಳಿದ್ದಾರೆ. ಆದ್ರೆ ಇದು ಸುಳ್ಳು ಅಂತ ನಿತೀಶ್ ಕುಮಾರ್ ಹೇಳಿದ್ದಾರೆ. ನಿನ್ನೆ ಮತ್ತೊಬ್ಬ RJD ನಾಯಕ, ‘ನಿತೀಶ್ ಕುಮಾರ್ ಮಹಾಘಟಬಂದನ್ ಜೊತೆ ಕೈಜೋಡಿಸಬೇಕು. ಸಿಎಂ ಕುರ್ಚಿಯನ್ನ ತೇಜಸ್ವಿ ಯಾದವ್ಗೆ ಬಿಟ್ಟು ಕೊಡಬೇಕು. ಇದಕ್ಕೆ ಪ್ರತಿಯಾಗಿ ನಾವು ನಿತೀಶ್ ಕುಮಾರ್ ಅವರನ್ನ ಪ್ರಧಾನಿ ಅಭ್ಯರ್ಥಿಯಾಗಿ ಮಾಡ್ತೇವೆ’ ಅಂತ ಹೇಳಿದ್ದರು.
-masthmagaa.com
Contact Us for Advertisement