ಗಾಯದ ಬಗ್ಗೆ ಪೋಸ್ಟ್‌ ಮಾಡಿದ ಅಮಿತಾಬ್‌

masthmagaa.com:

ಸಿನಿಮಾದ ಶೂಟಿಂಗ್‌ ವೇಳೆ ಅಮಿತಾಬ್‌ಗೆ ಗಾಯ ಆಗಿತ್ತು. ಸೋ ಅವರು ರೆಸ್ಟ್‌ನಲ್ಲಿದ್ರು. ಮೆಗಾ ಸ್ಟಾರ್‌ ಅಮಿತಾಬ್‌ ಅವರಿಗೆ ಗಾಯ ಆಗಿರೋದಕ್ಕೆ ಸಿನಿಮಾ ಕೊಂಚ ನಿಧಾನಗತಿಯಲ್ಲಿ ನಡೀತಾ ಇದೆ. ಪ್ರಬಾಸ್‌ ನಟನೆಯ ಪ್ರಾಜೆಕ್ಡ್‌ ಕೆ ಸಿನಿಮಾ ಶೂಟಿಂಗ್‌ ವೇಳೆ ಈ ಅವಗಢ ಸಂಭವಿಸಿತ್ತು. ಸದ್ಯ ಅಮಿತಾಬ್‌ ಗುಣಮುಖರಾಗ್ತಾ ಇದಾರೆ. ಇವರ ಬಗ್ಗೆ ಅವರೇ ಸ್ವತಃ ಹೇಳಿಕೊಂಡಿದ್ದಾರೆ. ‘ಒಬ್ಬ ವ್ಯಕ್ತಿ ಕಳೆದುಹೋದ ಅವಕಾಶ ನೆನೆದು ಕೊರಗಬಹುದು ಅಥವಾ ಎದ್ದುನಿಂತು ಕಷ್ಟಗಳನ್ನು ಎದುರಿಸಿ ಮುಂದೆ ಸಾಗಬಹುದು. ಸೋಲಿನಿಂದ ಆದ ನಷ್ಟದ ನೋವು ತುಂಬಾ ದೊಡ್ಡದು. ದೇಹವು ಎಷ್ಟು ಬೇಗನೆ ಗಾಯಗೊಳ್ಳುತ್ತದೆಯೋ ಅಷ್ಟೇ ಬೇಗ ಗುಣವಾಗುತ್ತದೆ. ಎದ್ದೇಳಿ, ಹೋಗಿ ಮತ್ತೆ ಕೆಲಸ ಮಾಡಿ. ಯಾರಿಗೆ ಕೆಲಸವು ಹೊಸ ಆರಂಭವನ್ನು ತರುತ್ತದೆಯೋ ಅವರು ಸ್ವಂತವಾಗಿ ಮಾತನಾಡುತ್ತಾರೆ. ಇದು ನನ್ನ ದೇಹ , ನನ್ನ ಮನಸ್ಸು, ನನ್ನ ಇಚ್ಛೆ, ನನ್ನ ಬಯಕೆ’ ಎಂದು ಬರೆದುಕೊಂಡಿದ್ದಾರೆ ಅಮಿತಾಭ್ ಬಚ್ಚನ್. ಅಲ್ಲದೇ ಜೀವನವೊಂದು ಚುಚ್ಚಿದ ಬಾಣ, ಸತ್ತಿರುವ ಮನಸ್ಸು. ಇದು ಸತ್ಯ. ಇದಕ್ಕೆ ಪುರಾವೆ ತರುವ ಅಗತ್ಯ ಇಲ್ಲ. ಮೊದಲು ದೇಹದಿಂದ ಬಾಣವನ್ನು ಹೊರತೆಗೆಯಿರಿ. ಬಾಣ ಹೊಡೆಯಲು ಯಾರು ಬಿಲ್ಲು ಎಳೆದರು, ಅವನು ಅದನ್ನು ಏಕೆ ಮಾಡಿದ ಇವುಗಳನ್ನು ನಂತರ ಯೋಚಿಸಬೇಕು. ಮೊದಲು ಬಾಣ ಹೊರತೆಗೆಯಿರಿ’ ಎಂದಿದ್ದಾರೆ ಅಮಿತಾಭ್. 80ರ ಹರೆಯದಲ್ಲೂ ಯುವಕರಂತೆ ಕೆಲಸ ಮಾಡುವ ಅಮಿತಾಬ್‌ ಈಗ ಎಲ್ಲಾ ಯುವ ಶಕ್ತಿಗಳಿಗೆ ಮಾದರಿಯಾಗಿದ್ದಾರೆ. ಇತ್ತೀಚೆಗೆ ಅಮಿತಾಬ್‌ “ಕಬ್ಜ”ಚಿತ್ರಕ್ಕೆ ಒಳ್ಳೆದಾಗಲಿ ಅಂತ ವಿಶ್‌ ಕೂಡ ಮಾಡಿದ್ರು.

-masthmagaa.com

Contact Us for Advertisement

Leave a Reply