ಹಿಂದೂ-ಮುಸ್ಲಿಂ ಅನ್ನೋ ಭೇದ ಮರೆತು ಪ್ಲಾಸ್ಮಾ ದಾನ ಮಾಡಿ: ಕೇಜ್ರಿವಾಲ್​

masthmagaa.com:

ದೆಹಲಿ: ಹಿಂದೂ-ಮುಸ್ಲಿಂ  ಅನ್ನೋದನ್ನ ಮರೆತು ಕೊರೋನಾದಿಂದ ಗುಣಮುಖರಾದವರು ಪ್ಲಾಸ್ಮಾ ದಾನಕ್ಕೆ ಮುಂದಾಗಬೇಕು ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಕರೆ ಕೊಟ್ಟಿದ್ದಾರೆ. ಮಾಧ್ಯಮಗಳೊಂದಿಗೆ  ಮಾತನಾಡಿದ ಅವರು, ಕೊರೋನಾದಿಂದ ಗುಣಮುಖರಾದವರು ಮುಂದೆ ಬಂದು ಪ್ಲಾಸ್ಮಾ ದಾನ ಮಾಡಿ.. ನಾವೆಲ್ಲರೂ ಒಟ್ಟಾಗಿ ಕೊರೋನಾ ವೈರಸ್ ವಿರುದ್ಧ ಹೋರಾಡಬೇಕಾಗಿದೆ ಅಂದ್ರು.

ಜೊತೆಗೆ ಮುಂದಿನ ದಿನಗಳಲ್ಲಿ ಕೊರೋನಾದಿಂದ ತುಂಬಾ ಗಂಭೀರ ಸ್ಥಿತಿಯಲ್ಲಿರುವ ಹಿಂದೂ ರೋಗಿಯೊಬ್ಬರನ್ನು ಮುಸ್ಲಿಂ ವ್ಯಕ್ತಿಯ ಪ್ಲಾಸ್ಮಾ ಉಳಿಸಬಹುದು..ಅದೇ ರೀತಿ ಗಂಭೀರ ಸ್ಥಿತಿಯಲ್ಲಿರೋ ಮುಸ್ಲಿಂ ರೋಗಿಯನ್ನು ಹಿಂದೂ ವ್ಯಕ್ತಿಯ ಪ್ಲಾಸ್ಮಾ ಉಳಿಸಬಹುದು.. ಹಿಂದೂ ಆಗಿರಲಿ..ಮುಸ್ಲಿಂ ಆಗಿರಲಿ.. ಯಾರಿಗೆ ಬೇಕಾದ್ರೂ ಈ ಮಹಾಮಾರಿ ಕೊರೋನಾ ವೈರಸ್ ಬರಬಹುದು.. ಹೀಗಾಗಿ ಎಲ್ಲರೂ ಧರ್ಮವನ್ನು ಮರೆತು ಪ್ಲಾಸ್ಮಾ ದಾನ ಮಾಡಲು ಮುಂದಾಗಿ ಎಂದು ಕೊರೋನಾದಿಂದ ಗುಣಮುಖರಾದವರಲ್ಲಿ ಮನವಿ ಮಾಡಿದ್ದಾರೆ.

-masthmagaa.com

Contact Us for Advertisement

Leave a Reply