ದುಷ್ಕರ್ಮಿಗಳು ತುಂಡರಿಸಿದ್ದ ಪೊಲೀಸ್ ಕೈ ಪುನಃ ಜೋಡಿಸಿದ ವೈದ್ಯರು..!

masthmagaa.com:

ಪಂಜಾಬ್​: ಕೆಲ ದುಷ್ಟರು ಲಾಕ್​ಡೌನ್ ಉಲ್ಲಂಘಿಸಿದ್ದನ್ನು ಪ್ರಶ್ನಿಸಿದ ಎಎಸ್​ಐ ಕೈ ಕಟ್ ಮಾಡಿ ಓಡಿ ಹೋಗಿದ್ದರು. ನಂತರ ಸತತ ಏಳೂವರೆ ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರು ಎಎಸ್​​ಐ ಕೈಯನ್ನು ಪುನಃ ಜೋಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

ನಿನ್ನೆ ಪಂಜಾಬ್​ನ ಪಟಿಯಾಲದಲ್ಲಿ ವಾಹನವೊಂದರಲ್ಲಿ ನಿಹಾಂಗ್​​ ಎಂಬ ಪಂಥದ ಅನುಯಾಯಿಗಳು ಸಾಗುತ್ತಿದ್ದರು. ಈ ವೇಳೆ ಪೊಲೀಸರು ವಾಹನವನ್ನು ತಡೆದು, ಕರ್ಫ್ಯೂ ಪಾಸ್ ಕೇಳಿದ್ದಾರೆ. ಆದ್ರೆ ಈ ವೇಳೆ ವಾಹನದಲ್ಲಿದ್ದ ಗುಂಪು ಪೊಲೀಸರ ಮೇಲೆಯೇ ಹಲ್ಲೆ ನಡೆಸಿದೆ. ಈ ವೇಳೆ ಹರ್ಜೀತ್ ಸಿಂಗ್ ಅವರ ಕೈ ತುಂಡಾಗಿದೆ. ನಂತರ ಈ ಪಾಪಿಗಳು ನಿಹಾಂಗ್ ಗುರುದ್ವಾರ್ ಸಾಹೇಬ್​​​ಗೆ ಓಡಿಹೋಗಿದ್ದರು. ನಂತರದಲ್ಲಿ ಪುಂಡರನ್ನು ಅರೆಸ್ಟ್ ಮಾಡಿದ್ದ ಪೊಲೀಸರು, ಠಾಣೆಗೆ ಕರೆದೊಯ್ದು ಸರಿಯಾಗಿ ಬೆಂಡೆತ್ತಿ, ಕೇಸ್ ದಾಖಲಿಸಿದ್ದರು.

ಗಾಯಗೊಂಡ ಹರ್ಜೀತ್ ಸಿಂಗ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಏಳೂವರೆ ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರು, ಹರ್ಜೀತ್ ಸಿಂಗ್ ಅವರ ಕೈಯನ್ನು ಪುನಃ ಜೋಡಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಸಿಎಂ ಅಮರಿಂದರ್ ಸಿಂಗ್​, ವೈದ್ಯರ ತಂಡಕ್ಕೆ ಧನ್ಯವಾದ ತಿಳಿಸಿದ್ದಾರೆ.

-masthmagaa.com

Contact Us for Advertisement

Leave a Reply