masthmagaa.com:
ಪಂಜಾಬ್: ಕೆಲ ದುಷ್ಟರು ಲಾಕ್ಡೌನ್ ಉಲ್ಲಂಘಿಸಿದ್ದನ್ನು ಪ್ರಶ್ನಿಸಿದ ಎಎಸ್ಐ ಕೈ ಕಟ್ ಮಾಡಿ ಓಡಿ ಹೋಗಿದ್ದರು. ನಂತರ ಸತತ ಏಳೂವರೆ ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರು ಎಎಸ್ಐ ಕೈಯನ್ನು ಪುನಃ ಜೋಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ನಿನ್ನೆ ಪಂಜಾಬ್ನ ಪಟಿಯಾಲದಲ್ಲಿ ವಾಹನವೊಂದರಲ್ಲಿ ನಿಹಾಂಗ್ ಎಂಬ ಪಂಥದ ಅನುಯಾಯಿಗಳು ಸಾಗುತ್ತಿದ್ದರು. ಈ ವೇಳೆ ಪೊಲೀಸರು ವಾಹನವನ್ನು ತಡೆದು, ಕರ್ಫ್ಯೂ ಪಾಸ್ ಕೇಳಿದ್ದಾರೆ. ಆದ್ರೆ ಈ ವೇಳೆ ವಾಹನದಲ್ಲಿದ್ದ ಗುಂಪು ಪೊಲೀಸರ ಮೇಲೆಯೇ ಹಲ್ಲೆ ನಡೆಸಿದೆ. ಈ ವೇಳೆ ಹರ್ಜೀತ್ ಸಿಂಗ್ ಅವರ ಕೈ ತುಂಡಾಗಿದೆ. ನಂತರ ಈ ಪಾಪಿಗಳು ನಿಹಾಂಗ್ ಗುರುದ್ವಾರ್ ಸಾಹೇಬ್ಗೆ ಓಡಿಹೋಗಿದ್ದರು. ನಂತರದಲ್ಲಿ ಪುಂಡರನ್ನು ಅರೆಸ್ಟ್ ಮಾಡಿದ್ದ ಪೊಲೀಸರು, ಠಾಣೆಗೆ ಕರೆದೊಯ್ದು ಸರಿಯಾಗಿ ಬೆಂಡೆತ್ತಿ, ಕೇಸ್ ದಾಖಲಿಸಿದ್ದರು.
ಗಾಯಗೊಂಡ ಹರ್ಜೀತ್ ಸಿಂಗ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಏಳೂವರೆ ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರು, ಹರ್ಜೀತ್ ಸಿಂಗ್ ಅವರ ಕೈಯನ್ನು ಪುನಃ ಜೋಡಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಸಿಎಂ ಅಮರಿಂದರ್ ಸಿಂಗ್, ವೈದ್ಯರ ತಂಡಕ್ಕೆ ಧನ್ಯವಾದ ತಿಳಿಸಿದ್ದಾರೆ.
-masthmagaa.com
Contact Us for Advertisement