ಯಾರೇ ಇದ್ರೂ ಬಿಡೋದಿಲ್ಲ, ಬಲಿ ಹಾಕ್ತೀವಿ: ಸಿಎಂ ಬೊಮ್ಮಾಯಿ ಕೆಂಡ

masthmagaa.com:

ಬಿಟ್​​ಕಾಯಿನ್ ಹಗರಣದಲ್ಲಿ ಬಿಜೆಪಿಯವರಿಬ್ಬರು ಭಾಗಿಯಾಗಿರೋ ಮಾಹಿತಿ ಇದೆ ಎಂದಿದ್ದ ಸಿದ್ದರಾಮಯ್ಯಗೆ ಸಿಎಂ ಬಸವರಾಜ್ ಬೊಮ್ಮಾಯಿ ತಿರುಗೇಟು ಕೊಟ್ಟಿದ್ದಾರೆ. ಇದ್ರಲ್ಲಿ ಯಾರೇ ಇದ್ರೂ ಸುಮ್ನೆ ಬಿಡಲ್ಲ. ಬಲಿ ಹಾಕ್ತೀವಿ.. ಹಗರಣ ಹೆಮ್ಮರವಾಗಿ ಬೆಳೆಯಲು ಬಿಟ್ಟು ಈಗ ನಮ್ಮನ್ನು ಪ್ರಶ್ನಿಸ್ತೀರಾ..? ಇಬ್ಬರು ಭಾಗಿಯಾಗಿದ್ದಾರೆ ಅಂದ್ರೆ ಅವರ ಹೆಸರು ಹೇಳಲಿ. ದಾಖಲೆ ನೀಡಲಿ.. ಜಾರಿ ನಿರ್ದೇಶನಾಲಯಕ್ಕೇ ಬೇಕಾದ್ರೂ ದಾಖಲೆ ನೀಡಲಿ ಅಂತ ಸವಾಲು ಹಾಕಿದ್ದಾರೆ. ಇನ್ನು ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿರೋ ಸುಧಾಕರ್ ಕೂಡ, ಈ ಪ್ರಕರಣದ ತನಿಖೆ ನಡೆಯುತ್ತಿದ್ದು ಎಲ್ಲಾ ಮಾಹಿತಿಯನ್ನು ಜಾರಿ ನಿರ್ದೇಶನಾಲಯ, ಸಿಬಿಐ ಮತ್ತು ಇಂಟರ್​ಪೋಲ್​ ಜೊತೆ ಶೇರ್ ಮಾಡ್ಕೊಂಡಿದ್ದೀವಿ. ಕರ್ನಾಟಕ ಪೊಲೀಸರ ಬಗ್ಗೆ ಒಂದು ಗೌರವ ಇದೆ. ಅದನ್ನು ರಾಜಕಾರಣಿಗಳು ಹಾಳು ಮಾಡಬಾರದು ಅಂತ ಹೇಳಿದ್ರು.

-masthmagaa.com

Contact Us for Advertisement

Leave a Reply