masthmagaa.com:
ಮಹಾರಾಷ್ಟ್ರದ ಪಾಲ್ಘರ್ ಬಳಿಕ ಈಗ ಉತ್ತರ ಪ್ರದೇಶದ ಬುಲಂದ್ ಶಹರ್ನ ಸಾಧುಗಳ ಹತ್ಯೆ ರಾಜಕೀಯ ಸ್ವರೂಪ ಪಡೆದುಕೊಂಡಿದೆ. ಬುಲಂದ್ ಶಹರ್ನಲ್ಲಿ ಸಾಧುಗಳ ಹತ್ಯೆ ವಿಚಾರ ಸುದ್ದಿಯಾಗುತ್ತಿದ್ದಂತೆ ಟ್ವೀಟ್ ಮಾಡಿದ್ದ ಶಿವಸೇನೆ ವಕ್ತಾರ ಸಂಜಯ್ ರಾವತ್, ಉದ್ದವ್ ಠಾಕ್ರೆಯವರು ಸಿಎಂ ಯೋಗಿ ಆದಿತ್ಯನಾಥ್ ಅವರಿಗೆ ಕರೆ ಮಾಡಿ, ಸಾಧುಗಳನ್ನು ಹತ್ಯೆಗೈದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ ಎಂದಿದ್ದರು.
ಆದ್ರೆ ಇಂದು ಸಂಜಯ್ ರಾವತ್ ಮತ್ತು ಉದ್ಧವ್ ಠಾಕ್ರೆಗೆ ಯೋಗಿ ಆದಿತ್ಯನಾಥ್ ಅವರ ಕಚೇರಿ ಕಡೆಯಿಂದ ತಿರುಗೇಟು ನೀಡಲಾಗಿದೆ. ಈ ಬಗ್ಗೆ ಯೋಗಿ ಆದಿತ್ಯನಾಥ್ ಕಚೇರಿ ಕಡೆಯಿಂದ ಟ್ವೀಟ್ ಮಾಡಲಾಗಿದ್ದು, ಸಿಎಂ ಯೋಗಿ ಆದಿತ್ಯನಾಥ್ ಅವರ ನೇತೃತ್ವದಲ್ಲಿ ಉತ್ತರ ಪ್ರದೇಶದಲ್ಲಿ ಕಾನೂನಿನ ಆಳ್ವಿಕೆ ಇದೆ. ಇಲ್ಲಿ ಕಾನೂನು ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತೆ. ಬುಲಂದ್ ಶಹರ್ ಪ್ರಕರಣದಲ್ಲೂ ಶೀಘ್ರವಾಗಿ ಕ್ರಮಕೈಗೊಂಡು, ಗಂಟೆಯೊಳಗೆ ಆರೋಪಿಯನ್ನು ಅರೆಸ್ಟ್ ಮಾಡಲಾಯ್ತು. ನೀವು ಮಹಾರಾಷ್ಟ್ರವನ್ನು ನೋಡಿಕೊಳ್ಳಿ.. ಉತ್ತರ ಪ್ರದೇಶದ ಚಿಂತೆ ನಿಮಗೆ ಬೇಡ ಎಂದು ತಿರುಗೇಟು ನೀಡಲಾಗಿದೆ.
-masthmagaa.com
Contact Us for Advertisement