masthmagaa.com:
ದೇಶದ ಕೊರೋನಾ ಪರಿಸ್ಥಿತಿಯನ್ನ ಪರಿಶೀಲಿಸಲು ಪ್ರಧಾನಿ ಮೋದಿ ಇವತ್ತು ಸರ್ವಪಕ್ಷ ಸಭೆ ನಡೆಸಿದ ಬಳಿಕ ಮಾತನಾಡಿದ ಕಾಂಗ್ರೆಸ್ ನಾಯಕ ಅಧಿರ್ ರಂಜನ್ ಚೌಧುರಿ, ‘ಸಾಮಾನ್ಯ ಜನರಿಗೆ ಲಸಿಕೆ ಹಾಕಲು ಕೇಂದ್ರ ಸರ್ಕಾರದ ಬಳಿ ಯಾವುದೇ ಮಾರ್ಗಸೂಚಿ ಇಲ್ಲ. ಲಸಿಕೆ ಹಾಕಬೇಕಾದವರಿಗೆ ಲಸಿಕೆ ಹಾಕಲಾಗುವುದು ಅಂತ ಸರ್ಕಾರ ಹೇಳಿದೆ. ಆದ್ರೆ ಯಾರಿಗೆ ಹಾಕಬೇಕು ಅನ್ನೋದನ್ನ ನಿರ್ಧರಿಸೋದು ಯಾರು? ಸರ್ವಪಕ್ಷ ಸಭೆಯಲ್ಲಿ ಬಡವರಿಗೆ ಹೇಗೆ ಲಸಿಕೆ ಹಾಕಬೇಕು ಎಂಬ ಬಗ್ಗೆಯೂ ಯಾವುದೇ ಚರ್ಚೆ ನಡೆದಿಲ್ಲ’ ಅಂತ ಹೇಳಿದ್ದಾರೆ.
-masthmagaa.com
Contact Us for Advertisement