masthmagaa.com:
ಚಿಕ್ಕಮಗಳೂರು ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಚರ್ಚೆಗೆ ಸಂಬಂಧಿಸಿ ನಡೆದ ಸಭೆ ರಣರಂಗವಾಗಿದೆ. ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು ಪರಸ್ಪರ ಕಪಾಳಮೋಕ್ಷ ಮಾಡಿಕೊಂಡು ಕೈ ಕೈ ಮಿಲಾಯಿಸಿಕೊಂಡಿದ್ದಾರೆ. ಚಿಕ್ಕಮಗಳೂರಿನಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಕಣಕ್ಕಿಳಿಯುವುದು ಖಚಿತವಾಗಿದೆ. ಅವ್ರನ್ನ ಎದುರಿಸಲು ಕಾಂಗ್ರೆಸ್ ಇನ್ನು ಟಿಕೆಟ್ ಫೈನಲ್ ಮಾಡಿಲ್ಲ. ಟಿಕೆಟ್ಗಾಗಿ 6 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ. ಆದ್ರೆ ಇತ್ತೀಚೆಗೆ ಬಿಜೆಪಿಯಿಂದ ಕಾಂಗ್ರೆಸ್ಗೆ ಬಂದಿರೊ ಹೆಚ್ ಡಿ ತಿಮ್ಮಯ್ಯ ಅವ್ರಿಗೆ ಟಿಕೆಟ್ ಕೊಡಲು ಕಾಂಗ್ರೆಸ್ ಹೈಕಮಾಂಡ್ ನಿರ್ಧರಿಸಿದ್ದಾರೆ ಅನ್ನೊ ಸುದ್ದಿ ಹರಡಿದೆ. ಹೀಗಾಗಿ ಸಭೆ ಆರಂಭವಾಗ್ತಿದ್ದಂತೆ ಗಲಾಟೆ ನಡೆದಿದೆ.
-masthmagaa.com
Contact Us for Advertisement