ಉಗ್ರರೊಂದಿಗಿನ ಕಾಳಗದಲ್ಲಿ ಕರ್ನಲ್, ಮೇಜರ್ ಸೇರಿ ಐವರು ಹುತಾತ್ಮ

masthmagaa.com:

ಉತ್ತರ ಕಾಶ್ಮೀರದ ಹಂದ್ವಾರದಲ್ಲಿ ಭಾರತೀಯ ಸೇನೆ ಹಾಗೂ ಉಗ್ರರ ನಡುವೆ ನಡೆದ ಗುಂಡಿನ ಕಾಳಗದಲ್ಲಿ ಕರ್ನಲ್ ಹಾಗೂ ಮೇಜರ್ ಸೇರಿದಂತೆ ಭದ್ರತಾ ಪಡೆಯ ಐವರು ಹುತಾತ್ಮರಾಗಿದ್ದಾರೆ. ಎನ್​ಕೌಂಟರ್​ನಲ್ಲಿ ಇಬ್ಬರು ಉಗ್ರರನ್ನು ಹೊಡೆದುರುಳಿಸಲಾಗಿದೆ ಅಂತ ಭಾರತೀಯ ಸೇನೆ ತಿಳಿಸಿದೆ.

ಕರ್ನಲ್ ಅಶುತೋಷ್ ಶರ್ಮಾ 21ನೇ ರಾಷ್ಟ್ರೀಯ ರೈಫಲ್ಸ್​ನ ಕಮಾಂಡಿಂಗ್ ಆಫೀಸರ್ ಆಗಿದ್ದರು. ಈ ಹಿಂದೆ ನಡೆದ ಹಲವು ಉಗ್ರ ನಿಗ್ರಹ ಕಾರ್ಯಾಚರಣೆಗಳಲ್ಲಿ ಭಾಗಿಯಾಗಿ ಎರಡು ಬಾರಿ ಗ್ಯಾಲಂಟ್ರಿ ಪದಕವನ್ನು ಕೂಡ ಪಡೆದಿದ್ದರು.

ಕುಪ್ವಾರಾ ಜಿಲ್ಲೆಯ ಹಂದ್ವಾರಾದ ಚಂಜ್‌ಮುಲ್ಲಾ ಪ್ರದೇಶದ ಮನೆಯೊಂದರಲ್ಲಿ ಅಡಗಿದ್ದ ಭಯೋತ್ಪಾದಕರು ಕೆಲ ನಾಗರಿಕರನ್ನ ಒತ್ತೆಯಾಳುಗಳನ್ನಾಗಿ ಇರಿಸಿಕೊಂಡಿದ್ದರು. ನಾಗರಿಕರನ್ನ ರಕ್ಷಿಸಲು ಕರ್ನಲ್‌ ಅಶುತೋಷ್ ಶರ್ಮಾ ಭದ್ರತಾ ಪಡೆಯನ್ನ ಮುನ್ನಡೆಸುತ್ತಿದ್ದರು ಎನ್ನಲಾಗಿದೆ.

-masthmagaa.com

Contact Us for Advertisement

Leave a Reply