masthmagaa.com:
ಮೇ 10 ರಂದು ನಡೆಯಲಿರೋ ರಾಜ್ಯ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ತನ್ನ ಅಭ್ಯರ್ಥಿಗಳ 2ನೇ ಪಟ್ಟಿಯನ್ನ ರಿಲೀಸ್ ಮಾಡಿದೆ. ಈ ಬಾರಿ 42 ಕ್ಷೇತ್ರಗಳಿಗೆ ಹೆಸರುಗಳನ್ನ ಪ್ರಕಟಿಸಲಾಗಿದೆ. ಕಳೆದ ಬಾರಿ ಕಾಂಗ್ರೆಸ್ ನಾಯಕ ಸಿದ್ಧರಾಮಯ್ಯ ಅವ್ರು ಸ್ಪರ್ಧಿಸಿದ್ದ ಬಾದಾಮಿ ಕ್ಷೇತ್ರದಲ್ಲಿ ಭೀಮಸೇನ್ ಬಿ.ಚಿಮ್ಮನಕಟ್ಟಿಗೆ ಟಿಕೆಟ್ ನೀಡಲಾಗಿದೆ. ಈ ಮೂಲಕ ಸಿದ್ರಾಮಯ್ಯ ಅವರ ಬಾದಾಮಿ ಗೊಂದಲಕ್ಕೆ ಅಂತಿಮ ತೆರೆಬಿದ್ದಿದೆ. ಇನ್ನು ಶಿಗ್ಗಾಂವಿಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ವಿರುದ್ಧ ಸ್ಪರ್ಧಿಸಲಿದ್ದಾರೆ ಅಂತ ಹೇಳಲಾಗಿದ್ದ ವಿನಯ್ ಕುಲಕರ್ಣಿ ಅವ್ರಿಗೆ ಧಾರವಾಡದಿಂದ ಟಿಕೆಟ್ ನೀಡಲಾಗಿದೆ. ಜೆಡಿಎಸ್ ಬಿಟ್ಟು ಬಂದಿದ್ದ ಎಸ್ ಆರ್ ಶ್ರೀನಿವಾಸ್ ಅವ್ರಿಗೆ ಗುಬ್ಬಿಯಲ್ಲಿ ಟಿಕೆಟ್ ಸಿಕ್ಕಿದೆ. ಇತ್ತ ಬಿಜೆಪಿ ತೊರೆದಿದ್ದ ಕೂಡ್ಲಿಗಿ ಶಾಸಕ ಎನ್ ವೈ ಗೋಪಾಲಕೃಷ್ಣ ಅವ್ರಿಗೆ ಮೊಣಕಾಲ್ಮುರು ಕ್ಷೇತ್ರದಿಂದ ಟಿಕೆಟ್ ಕೊಡಲಾಗಿದೆ. ಇನ್ನು ಕೋಲಾರ ಹಾಗೂ ಚನ್ನಪಟ್ಟಣ ಕ್ಷೇತ್ರದ ಅಭ್ಯರ್ಥಿಗಳು ಯಾರು ಅನ್ನೋದಕ್ಕೆ ಉತ್ತರ ಸಿಕ್ಕಿಲ್ಲ.) ಇನ್ನು 2ನೇ ಪಟ್ಟಿಯಲ್ಲಿ ಬಂದಿರೋ ಹೆಸರುಗಳನ್ನ ನೋಡಿದ್ರೆ ಈ ಬಾರಿ ಸಿದ್ದರಾಮಯ್ಯ ಅವರ ಬಹುತೇಕ ಆಪ್ತರಿಗೆ ಟಿಕೆಟ್ ಸಿಕ್ಕಿರೋದು ಕಂಡುಬಂದಿದೆ. ಟಿಕೆಟ್ಗಾಗಿ ತೀವ್ರ ಪೈಪೋಟಿ ನಡೆಸಿದ್ದ ಡಿಕೆ ಶಿವಕುಮಾರ್ ಆಪ್ತರಿಗೆ ಟಿಕೆಟ್ ಕೈತಪ್ಪಿದ್ದು, ಸಿದ್ದು ಬಣ ಮೇಲುಗೈ ಸಾಧಿಸಿದೆ. ಇದು ಪಕ್ಷದಲ್ಲಿ ಅಸಮಾಧಾನಕ್ಕೆ ಕಾರಣವಾಗಬಹುದು ಅಂತ ವಿಶ್ಲೇಷಿಸಲಾಗ್ತಿದೆ.
-masthmagaa.com
Contact Us for Advertisement