masthmagaa.com:
ಮಹಾರಾಷ್ಟ್ರಕ್ಕೆ ಭೇಟಿ ನೀಡಿ ವಾಪಸ್ ಪಂಜಾಬ್ಗೆ ತೆರಳಿದ್ದ 173 ಮಂದಿ ಸಿಖ್ ಯಾತ್ರಿಕರಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡಿದೆ. ಲಾಕ್ಡೌನ್ಗೂ ಮುನ್ನ ಪಂಜಾಬ್ನಿಂದ ಸುಮಾರು 4 ಸಾವಿರ ಮಂದಿ ಸಿಖ್ಖರು ಮಹಾರಾಷ್ಟ್ರದ ನಾಂದೆಡ್ನಲ್ಲಿರೋ ಗುರುದ್ವಾರ ಹಜುರ್ ಸಾಹಿಬ್ಗೆ ತೆರಳಿದ್ದರು. ಆದ್ರೆ ಮಾರ್ಚ್ 25ರಂದು ಲಾಕ್ಡೌನ್ ಹೇರಿದ್ದರಿಂದ ಎಲ್ಲರೂ ಅಲ್ಲೇ ಸಿಲುಕಿದ್ದರು.
ಕೇಂದ್ರ ಗೃಹ ಇಲಾಖೆ ಬೇರೆ ರಾಜ್ಯಗಳಲ್ಲಿ ಸಿಲುಕಿರುವವರು ತಮ್ಮ ರಾಜ್ಯಗಳಿಗೆ ತೆರಳಲು ಅನುಮತಿ ನೀಡಿದ ಬಳಿಕ ಇವರಲ್ಲಿ 3,500 ಮಂದಿ ಏಪ್ರಿಲ್ 22ರ ಬಳಿಕ ಪಂಜಾಬ್ಗೆ ವಾಪಸ್ಸಾಗಿದ್ದರು. ಆದ್ರೆ ಪಂಜಾಬ್ ಸರ್ಕಾರ ಇವರನ್ನು ಹೋದ ಕೂಡಲೇ ಕ್ವಾರಂಟೈನ್ನಲ್ಲಿ ಇಡಲಿಲ್ಲ. ಬದಲಾಗಿ 5 ದಿನಗಳ ಬಳಿಕ ಕ್ವಾರಂಟೈನ್ನಲ್ಲಿ ಇಟ್ಟಿತ್ತು. ಇದೀಗ ಇವರಲ್ಲಿ 173 ಮಂದಿಗೆ ಕೊರೋನಾ ಸೋಂಕು ತಗುಲಿದ್ದು, ಮತ್ತಷ್ಟು ಜನರಿಗೆ ಸೋಂಕು ಹರಡಿರೋ ಭೀತಿ ಎದುರಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಆರೋಗ್ಯ ಸಚಿವ ಬಲ್ಬೀರ್ ಸಿಂಗ್ ಸಿಧು, ಮಹಾರಾಷ್ಟ್ರ ಸರ್ಕಾರ ಸಿಖ್ ಯಾತ್ರಿಕರು ವಾಪಸ್ ಮರಳಲು ಸಹಾಯ ಮಾಡಲಿಲ್ಲ.. ಪರೀಕ್ಷೆಯನ್ನೂ ಮಾಡದೇ ಪಂಜಾಬ್ಗೆ ಮರಳಲು ಬಿಟ್ಟಿದೆ ಅಂತ ದೂರಿದ್ದಾರೆ.
ಆದ್ರೆ ಆರೋಗ್ಯ ಸಚಿವ ಬಲ್ಬೀರ್ ಸಿಂಗ್ ಅವರನ್ನು ತರಾಟೆಗೆ ತೆಗೆದುಕೊಂಡಿರೋ ವಿಪಕ್ಷ ಶಿರೋಮಣಿ ಅಕಾಲಿ ದಳ, ಸಿಖ್ ಯಾತ್ರಿಕರನ್ನು ಕ್ವಾರಂಟೈನ್ಗೆ ಒಳಪಡಿಸುವಲ್ಲಿ ನಿರ್ಲಕ್ಷ್ಯ ವಹಿಸಲಾಗಿದೆ. ಈಗ ಮಹಾರಾಷ್ಟ್ರದ ತಮ್ಮದೇ ಮೈತ್ರಿ ಸರ್ಕಾರದ ವಿರುದ್ಧ ಆರೋಪ ಹೊರಿಸುತ್ತಿದ್ದಾರೆ. ಈಗಿಂದೀಗಲೇ ಬಲ್ಬೀರ್ ಸಿಂಗ್ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದೆ.
-masthmagaa.com
Contact Us for Advertisement