masthmagaa.com:
ದೆಹಲಿ: ದಿನದಿಂದ ದಿನಕ್ಕೆ ಕೊರೋನಾ ಕಾಟ ಜಾಸ್ತಿಯಾಗ್ತಾನೇ ಇದೆ. ಇದೀಗ ಇರಾನ್ನಲ್ಲಿ ಸಿಲುಕಿದ್ದ 58 ಮಂದಿ ಭಾರತೀಯರನ್ನು ತವರಿಗೆ ಕರೆತರಲಾಗುತ್ತಿದೆ. 58 ಮಂದಿಯನ್ನು ಹೊತ್ತ ಭಾರತೀಯ ವಾಯುಪಡೆಯ ಸಿ-17 ವಿಮಾನ ಟೆಹ್ರಾನ್ನಿಂದ ಟೇಕಾಫ್ ಆಗಿದ್ದು, ಕೆಲವೇ ಕ್ಷಣಗಳಲ್ಲಿ ಉತ್ತರಪ್ರದೇಶದ ಹಿಂಡನ್ನಲ್ಲಿ ಲ್ಯಾಂಡ್ ಆಗಲಿದೆ ಅಂತ ವಿದೇಶಾಂಗ ಸಚಿವ ಎಸ್.ಜೈಶಂಕರ್ ಟ್ವೀಟ್ ಮಾಡಿದ್ದಾರೆ. ಅಲ್ಲದೆ ಮತ್ತೊಂದು ಟ್ವೀಟ್ನಲ್ಲಿ ಈ ಪ್ರಕ್ರಿಯೆಗೆ ಸಹಕರಿಸಿದ ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ.
ನೂರಾರು ಸಂಖ್ಯೆಯಲ್ಲಿ ಭಾರತೀಯರು ಇರಾನ್ನಲ್ಲಿ ವಾಸವಿದ್ದಾರೆ. ಈಗಾಗಲೇ ಇರಾನ್ನಲ್ಲಿ ಕೊರೋನಾ ವೈರಸ್ಗೆ 230 ಮಂದಿ ಬಲಿಯಾಗಿದ್ದು, 3000 ಜನರು ಸೋಂಕಿಗೆ ತುತ್ತಾಗಿದ್ದಾರೆ.
ಇನ್ನು ಭಾರತದಲ್ಲಿ ಕೊರೋನಾ ಸೋಂಕು ಪೀಡಿತರ ಸಂಖ್ಯೆ 47ಕ್ಕೆ ಏರಿಕೆಯಾಗಿದೆ. ನಿನ್ನೆಯಷ್ಟೇ ಬೆಂಗಳೂರಿನಲ್ಲೂ ಅಮೆರಿಕಾದಿಂದ ಮರಳಿದ್ದ ವ್ಯಕ್ತಿಯೊಬ್ಬರಲ್ಲಿ ಸೋಂಕು ಪತ್ತೆಯಾಗಿದೆ.
-masthmagaa.com
Contact Us for Advertisement