ಕೊರೋನಾ ಕಾಟ: ಇರಾನ್​​​ನಿಂದ 58 ಮಂದಿ ಭಾರತೀಯರು ವಾಪಸ್​​

masthmagaa.com:

ದೆಹಲಿ: ದಿನದಿಂದ ದಿನಕ್ಕೆ ಕೊರೋನಾ ಕಾಟ ಜಾಸ್ತಿಯಾಗ್ತಾನೇ ಇದೆ. ಇದೀಗ ಇರಾನ್​​ನಲ್ಲಿ ಸಿಲುಕಿದ್ದ 58 ಮಂದಿ ಭಾರತೀಯರನ್ನು ತವರಿಗೆ ಕರೆತರಲಾಗುತ್ತಿದೆ. 58 ಮಂದಿಯನ್ನು ಹೊತ್ತ ಭಾರತೀಯ ವಾಯುಪಡೆಯ ಸಿ-17 ವಿಮಾನ ಟೆಹ್ರಾನ್​​ನಿಂದ ಟೇಕಾಫ್ ಆಗಿದ್ದು, ಕೆಲವೇ ಕ್ಷಣಗಳಲ್ಲಿ ಉತ್ತರಪ್ರದೇಶದ ಹಿಂಡನ್​​ನಲ್ಲಿ ಲ್ಯಾಂಡ್ ಆಗಲಿದೆ ಅಂತ ವಿದೇಶಾಂಗ ಸಚಿವ ಎಸ್​​.ಜೈಶಂಕರ್ ಟ್ವೀಟ್ ಮಾಡಿದ್ದಾರೆ. ಅಲ್ಲದೆ ಮತ್ತೊಂದು ಟ್ವೀಟ್​​ನಲ್ಲಿ ಈ ಪ್ರಕ್ರಿಯೆಗೆ ಸಹಕರಿಸಿದ ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ.

ನೂರಾರು ಸಂಖ್ಯೆಯಲ್ಲಿ ಭಾರತೀಯರು ಇರಾನ್​ನಲ್ಲಿ ವಾಸವಿದ್ದಾರೆ. ಈಗಾಗಲೇ ಇರಾನ್​​ನಲ್ಲಿ ಕೊರೋನಾ ವೈರಸ್​​​​ಗೆ 230 ಮಂದಿ ಬಲಿಯಾಗಿದ್ದು, 3000 ಜನರು ಸೋಂಕಿಗೆ ತುತ್ತಾಗಿದ್ದಾರೆ.

ಇನ್ನು ಭಾರತದಲ್ಲಿ ಕೊರೋನಾ ಸೋಂಕು ಪೀಡಿತರ ಸಂಖ್ಯೆ 47ಕ್ಕೆ ಏರಿಕೆಯಾಗಿದೆ. ನಿನ್ನೆಯಷ್ಟೇ ಬೆಂಗಳೂರಿನಲ್ಲೂ ಅಮೆರಿಕಾದಿಂದ ಮರಳಿದ್ದ ವ್ಯಕ್ತಿಯೊಬ್ಬರಲ್ಲಿ ಸೋಂಕು ಪತ್ತೆಯಾಗಿದೆ.

-masthmagaa.com

Contact Us for Advertisement

Leave a Reply