ನಾನು ತ್ಯಾಗಿ ಅಲ್ಲ.. ನನ್ನದು ತ್ಯಾಗ ಬಲಿದಾನದ ರಾಜಕಾರಣ ಅಲ್ಲ – ಸಿ.ಟಿ ರವಿ ಮಾರ್ಮಿಕ ನುಡಿ

ಬೆಂಗಳೂರು: ಸಚಿವ ಸಂಪುಟ ವಿಸ್ತರಣೆಗೆ ಮುಹೂರ್ತ ಫಿಕ್ಸ್ ಆಗ್ತಿದ್ದಾಗೆ ರಾಜ್ಯ ಬಿಜೆಪಿಯಲ್ಲಿ ಅಲ್ಲೋಲ- ಕಲ್ಲೋಲ ಸೃಷ್ಟಿಯಾಗಿದೆ. ದಿನಕ್ಕೊಬ್ಬರು ಉರಿದು ಉರಿದುರಿದು ಬೀಳ್ತಿದ್ದಾರೆ. ಇವತ್ತು ಸಚಿವ ಸಿ.ಟಿ ರವಿ ಸರದಿ. ವಿಧಾನಸೌಧದಲ್ಲಿ ಮಾತನಾಡಿದ ಸಿಟಿ ರವಿ, ನಾನು ತ್ಯಾಗಿ ಅಲ್ಲ.. ನನ್ನದು ತ್ಯಾಗ ಬಲಿದಾನದ ರಾಜಕಾರಣವೂ ಅಲ್ಲ. ಹಾಗಂತ ಪರಮ ಸ್ವಾರ್ಥ ರಾಜಕಾರಣವೂ ಅಲ್ಲ ಎಂದಿದ್ದಾರೆ. ಈ ಮೂಲಕ ನಾನು ಯಾವುದೇ ಕಾರಣಕ್ಕೂ ಸಚಿವ ಸ್ಥಾನದಿಂದ ಹಿಂದೆ ಸರಿಯಲ್ಲ ಎಂದು ಪರೋಕ್ಷವಾಗಿ ಹೇಳಿದ್ದಾರೆ. ಅಲ್ಲದೆ ನನ್ನ ಖಾತೆ ಬದಲಾವಣೆ ಆದ್ರೆ ಅದನ್ನು ನಿರ್ವಹಣೆ ಮಾಡ್ತೇನೆ. ಖಾತೆ ಬದಲಾವಣೆ ರಿಲೇ ಬ್ಯಾಟನ್ ಇದ್ದಂಗೆ.. ಯಾವ ಬ್ಯಾಟನ್ ಕೊಡ್ತಾರೋ ಅದನ್ನ ಹಿಡಿದು ಹೋಗ್ತಿನಿ. ಪ್ರವಾಸೋದ್ಯಮ ಆಗಿರಬಹುದು. ಇನ್ನೊಂದು ಆಗಿರಬಹುದು. ವಸಂತ ಕಾಲ ಬಂದಾಗಲೇ ಕಾಗೆ ಯಾವ್ದು ಕೋಗಿಲೆ ಯಾವ್ದು ಗೊತ್ತಾಗುತ್ತೆ. ಇಂತಹ ಸಂದರ್ಭದಲ್ಲೆ ತತ್ವ ನಿಷ್ಠೆ ಪರೀಕ್ಷೆ ಆಗೋದು. ಈ ಹಿಂದೆಯೂ ನಾನು ಇಂಥಹ ಪರೀಕ್ಷೆ ಎದುರಿಸಿದ್ದೇನೆ. ಈಗಲೂ ಎದುರಿಸುತ್ತಿದ್ದೇನೆ ಎಂದು ಮಾರ್ಮಿಕವಾಗಿ ನುಡಿದಿದ್ದಾರೆ. ಇದು ಸಿಎಂಗೆ ಮತ್ತಷ್ಟು ತಲೆನೋವು ತಂದೊಡ್ಡಿದೆ.

Contact Us for Advertisement

Leave a Reply