masthmagaa.com:
ನನ್ನ ರಾಜಕೀಯ ಏಳಿಗೆಯನ್ನ ಸಹಿಸದವರು ಮತ್ತು ತಾನು ಈ ಹಿಂದೆ ಇದ್ದ ಪಕ್ಷದವರೇ ಜಾರಿ ನಿರ್ದೇಶನಾಲಯಕ್ಕೆ ದೂರು ನೀಡಿ ದಾಳಿ ಮಾಡಿಸಿದ್ದಾರೆ ಅಂತ ಕಾಂಗ್ರೆಸ್ ಶಾಸಕ ಜಮೀರ್ ಅಹಮದ್ ಖಾನ್ ಆರೋಪಿಸಿದ್ದಾರೆ ಅಂತ ವರದಿಯಾಗಿದೆ. ತಾನು ಹಿಂದೆ ಇದ್ದ ಪಕ್ಷ ಅಂದ್ರೆ ಜೆಡಿಎಸ್. ಜಮೀರ್ ಅಹ್ಮದ್ ಖಾನ್ 2016ರವರೆಗೆ ಜೆಡಿಎಸ್ ಪಕ್ಷದಲ್ಲಿದ್ರು. ಸೋ ಪರೋಕ್ಷವಾಗಿ ಮಾಜಿ ಸಿಎಂ ಕುಮಾರಸ್ವಾಮಿ ಕಡೆ ಜಮೀರ್ ಬೊಟ್ಟು ಮಾಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರೋ ಕುಮಾರಸ್ವಾಮಿ, ಜಮೀರ್ ಅಹ್ಮದ್ ಖಾನ್ ಮನೆ ಮೇಲೆ ಇಡಿಯಿಂದ ದಾಳಿ ಮಾಡಿಸುವ ಅವಶ್ಯಕತೆ ನಂಗಿಲ್ಲ. ಕೇಂದ್ರ ಸರ್ಕಾರ ನನ್ನ ಕೈಯಲ್ಲೂ ಇಲ್ಲ ಎಂದಿದ್ದಾರೆ.
-masthmagaa.com
Contact Us for Advertisement