ಐಟಿ ದಾಳಿಗೆ ಕುಮಾರಸ್ವಾಮಿ ಕಡೆ ಬೊಟ್ಟು ಮಾಡಿದ ಜಮೀರ್!

masthmagaa.com:

ನನ್ನ ರಾಜಕೀಯ ಏಳಿಗೆಯನ್ನ ಸಹಿಸದವರು ಮತ್ತು ತಾನು ಈ ಹಿಂದೆ ಇದ್ದ ಪಕ್ಷದವರೇ ಜಾರಿ ನಿರ್ದೇಶನಾಲಯಕ್ಕೆ ದೂರು ನೀಡಿ ದಾಳಿ ಮಾಡಿಸಿದ್ದಾರೆ ಅಂತ ಕಾಂಗ್ರೆಸ್‌ ಶಾಸಕ ಜಮೀರ್‌ ಅಹಮದ್‌ ಖಾನ್ ಆರೋಪಿಸಿದ್ದಾರೆ ಅಂತ ವರದಿಯಾಗಿದೆ. ತಾನು ಹಿಂದೆ ಇದ್ದ ಪಕ್ಷ ಅಂದ್ರೆ ಜೆಡಿಎಸ್​. ಜಮೀರ್ ಅಹ್ಮದ್​ ಖಾನ್​ 2016ರವರೆಗೆ ಜೆಡಿಎಸ್​ ಪಕ್ಷದಲ್ಲಿದ್ರು. ಸೋ ಪರೋಕ್ಷವಾಗಿ ಮಾಜಿ ಸಿಎಂ ಕುಮಾರಸ್ವಾಮಿ ಕಡೆ ಜಮೀರ್ ಬೊಟ್ಟು ಮಾಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರೋ ಕುಮಾರಸ್ವಾಮಿ, ಜಮೀರ್​ ಅಹ್ಮದ್​ ಖಾನ್​ ಮನೆ ಮೇಲೆ ಇಡಿಯಿಂದ ದಾಳಿ ಮಾಡಿಸುವ ಅವಶ್ಯಕತೆ ನಂಗಿಲ್ಲ. ಕೇಂದ್ರ ಸರ್ಕಾರ ನನ್ನ ಕೈಯಲ್ಲೂ ಇಲ್ಲ ಎಂದಿದ್ದಾರೆ.

-masthmagaa.com

Contact Us for Advertisement

Leave a Reply